ಇಂಡಿಗೋ ವಿಮಾನ 
ರಾಜ್ಯ

ಜನವರಿಯಲ್ಲಿ ಹುಬ್ಬಳ್ಳಿಯಿಂದ ದೇಶದ ವಿವಿಧೆಡೆಗೆ ವಿಮಾನ ಸೇವೆ ಪುನರ್ ಆರಂಭ!

 ಹೊಸ ವರ್ಷದಿಂದ ಹುಬ್ಬಳ್ಳಿಯಿಂದ ಅಹಮದಾಬಾದ್, ತಿರುಪತಿ, ಬೆಂಗಳೂರು, ಕೊಚ್ಚಿ, ಗೋವಾ, ಹೈದರಾಬಾದ್ ಮತ್ತು ನವದೆಹಲಿಗೆ ವಿಮಾನ ಸೇವೆ ಪ್ರಾರಂಭವಾಗಲಿದೆ.

ಹುಬ್ಬಳ್ಳಿ:  ಹೊಸ ವರ್ಷದಿಂದ ಹುಬ್ಬಳ್ಳಿಯಿಂದ ಅಹಮದಾಬಾದ್, ತಿರುಪತಿ, ಬೆಂಗಳೂರು, ಕೊಚ್ಚಿ, ಗೋವಾ, ಹೈದರಾಬಾದ್ ಮತ್ತು ನವದೆಹಲಿಗೆ ವಿಮಾನ ಸೇವೆ ಪ್ರಾರಂಭವಾಗಲಿದೆ. ಇಂಡಿಗೊ, ಸ್ಟಾರ್ ಏರ್ ಮತ್ತು ಟ್ರೂ ಜೆಟ್ ವಿಮಾನಯಾನ ಸಂಸ್ಥೆಗಳು ಹುಬ್ಬಳ್ಳಿಯಿಂದ ಇತರ ನಗರಗಳಿಗೆ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ನೆರವಾಗಲಿವೆ.

ಹುಬ್ಬಳ್ಳಿ - ಅಹಮದಾಬಾದ್ ನಡುವೆ ಜನವರಿ 4 ರಿಂದ ಇಂಡಿಗೊ ಏರ್ ಲೈನ್ಸ್  ವಿಮಾನ ಸೇವೆಯನ್ನು ಆರಂಭಿಸಲಿದೆ. ಹೆಚ್ಚಾಗಿ ವ್ಯಾಪಾರಿ ಪ್ರಯಾಣಿಕರೇ ಸಂಚರಿಸುವ ಈ ಮಾರ್ಗ ಪ್ರಸಿದ್ಧ ಮಾರ್ಗಗಳಲ್ಲಿ ಒಂದಾಗಿದೆ. ಲಾಕ್ ಡೌನ್ ಜಾರಿಯಾದ ನಂತರ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಜನವರಿಯಿಂದ ಪುನರ್ ಆರಂಭವಾಗಲಿದೆ. 

ಈ ಮಾರ್ಗದಲ್ಲಿ ವಿಮಾನ ಸೇವೆ ಪುನರ್ ಆರಂಭಕ್ಕೆ ತೀವ್ರವಾದ ಬೇಡಿಕೆ ಇತ್ತೆಂದು ಖಚಿತ ಮೂಲಗಳು ತಿಳಿಸಿವೆ. ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಈ ಮಾರ್ಗದಲ್ಲಿ ಇಂಡಿಯೋ ಏರ್ ಬಸ್ ಕಾರ್ಯಾರಂಭಿಸಲಿದೆ.

ಕೊಚ್ಚಿ- ಹುಬ್ಬಳ್ಳಿ, ಗೋವಾ: ಜನವರಿ ಎರಡನೇ ವಾರದಿಂದ ಕೇರಳ, ಗೋವಾ ಮತ್ತು ಹುಬ್ಬಳ್ಳಿಯನ್ನು ಸಂಪರ್ಕಿಸುವ ವಿಮಾನ ಸೇವೆಯನ್ನು ಇಂಡಿಗೋ ಆರಂಭಿಸುತ್ತಿದೆ. ನವದೆಹಲಿಗೆ ನೂತನ ವಿಮಾನ ಆರಂಭಿಸುವ ಪ್ರಸ್ತಾವವಿದೆ. ಹುಬ್ಬಳ್ಳಿಯಿಂದ ನೇರವಾಗಿ ದೆಹಲಿಗೆ ವಿಮಾನ ಸೇವೆ ಆರಂಭಿಸುವ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಸಕ್ತಿ ಹೊಂದಿದ್ದಾರೆ. ಸಂಬಂಧಿತ ಇಲಾಖೆಗಳ ಅನುಮತಿ ಪಡೆದ ಬಳಿಕ ಮಾರ್ಚ್ ನಲ್ಲಿ ಈ ಮಾರ್ಗದಲ್ಲಿ ಇಂಡಿಗೊ ವಿಮಾನ ಸೇವೆ ಆರಂಭಿಸುವ ಸಾಧ್ಯತೆಯಿದೆ.

ಹುಬ್ಬಳಿಗೆ ಆಗಮಿಸುತ್ತಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ವಿವಿಧ ನಗರಗಳಿಗೆ ವಿಮಾನ ಸೇವೆ ಆರಂಭಿಸುವುದಕ್ಕೆ ತೀವ್ರವಾದ ಬೇಡಿಕೆಯಿದೆ. ಜನವರಿಯಿಂದ ಹೆಚ್ಚಿನ ಸಂಖ್ಯೆಯ ವಿಮಾನಗಳು ಸೇವೆಯನ್ನು ಆರಂಭಿಸಲಿವೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ಉಪ ಜನರಲ್ ಮ್ಯಾನೇಜರ್ ರೂಪೇಶ್ ಕುಮಾರ್ ಹೇಳಿದ್ದಾರೆ.

ಜನವರಿ ಎರಡನೇ ವಾರದಿಂದ ತಿರುಪತಿಗೆ ವಿಮಾನ ಸೇವೆ ಆರಂಭಿಸಲು ಸ್ಟಾರ್ ಏರ್ ಕಂಪನಿ ಚಿಂತನೆ ನಡೆಸಿದೆ. ಇದು ಇನ್ನೂ ದೃಢಪಟ್ಟಿಲ್ಲ. ಆದರೆ, ಜನವರಿ ಮಧ್ಯದಿಂದ ತಿರುಪತಿಗೆ ವಿಮಾನ ಸೇವೆ ಆರಂಭವಾಗಲಿದೆ ಎಂದು ವಿಮಾನಯಾನದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ಹುಬ್ಬಳಿ-ಬೆಂಗಳೂರು ಮತ್ತು ಹುಬ್ಬಳ್ಳಿ- ಹೈದ್ರಾಬಾದ್ ನಡುವೆ ವಿಮಾನಗಳ ಕಾರ್ಯಾಚರಣೆಗೆ ಟ್ರೂ ಜೆಟ್ ಕಂಪನಿ ಅನುಮತಿ ಪಡೆದುಕೊಂಡಿದೆ. ಇತ್ತೀಚಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಟ್ರೂ ಜೆಟ್ ಅಧಿಕಾರಿಗಳು ಜನವರಿ ಮಧ್ಯಭಾಗದಿಂದ ಎರಡು ಮಾರ್ಗಗಳಲ್ಲಿ ವಿಮಾನ ಸೇವೆ ಆರಂಭಿಸಲು ಆಸಕ್ತಿ ತೋರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT