ಸಾಂದರ್ಭಿಕ ಚಿತ್ರ 
ರಾಜ್ಯ

ಅಂಚೆ ಕಚೇರಿಯ ಕೆಂಪು ಪೆಟ್ಟಿಗೆಯಿಂದ ಮನೆ ಬಾಗಿಲಿಗೆ: ಪತ್ರಗಳ ಇ-ಕ್ಲಿಯರೆನ್ಸ್ ವಿಲೇವಾರಿ 

ರಾಜ್ಯದ ಅಂಚೆ ಕಚೇರಿಗಳ ಕೆಂಪು ಬಾಕ್ಸ್ ಗಳಲ್ಲಿ ಹಾಕಿದ ಪತ್ರಗಳನ್ನು ಇ ವಿಲೇವಾರಿ ಮಾಡಲು ಅಂಚೆ ಕಚೇರಿ ಸಿಬ್ಬಂದಿ ಪ್ರಕ್ರಿಯೆ ಆರಂಭಿಸಿದ್ದಾರೆ.

ಬೆಂಗಳೂರು: ರಾಜ್ಯದ ಅಂಚೆ ಕಚೇರಿಗಳ ಕೆಂಪು ಬಾಕ್ಸ್ ಗಳಲ್ಲಿ ಹಾಕಿದ ಪತ್ರಗಳನ್ನು ಇ ವಿಲೇವಾರಿ ಮಾಡಲು ಅಂಚೆ ಕಚೇರಿ ಸಿಬ್ಬಂದಿ ಪ್ರಕ್ರಿಯೆ ಆರಂಭಿಸಿದ್ದಾರೆ.

ಇದರಿಂದ ನಾಗರಿಕರಿಗೆ ಪತ್ರ ತಲುಪಲು ಸುಲಭವಾಗುವುದಲ್ಲದೆ, ಅಂಚೆ ಕಚೇರಿ ಸಿಬ್ಬಂದಿಗೆ ಸಹ ಕೆಲಸದಲ್ಲಿ ಅನುಕೂಲವಾಗಲಿದೆ. ಇದರ ಪ್ರಾಯೋಗಿಕ ಯೋಜನೆಯನ್ನು ಯಶಸ್ವಿಯಾಗಿ ನಡೆಸಿರುವ ಕರ್ನಾಟಕ ವೃತ್ತ ಅಂಚೆ ಇಲಾಖೆ, ಎರಡು ತಿಂಗಳ ಹಿಂದೆ ಇ-ಕ್ಲಿಯರೆನ್ಸ್ ಪ್ರಯೋಗವನ್ನು ಆರಂಭಿಸಿತ್ತು.

ಕರ್ನಾಟಕದಲ್ಲಿ ಸುಮಾರು 7,200 ಅಂಚೆ ಬಾಕ್ಸ್ ಗಳಲ್ಲಿರುವ 2,184 ಪತ್ರಗಳನ್ನು ಇ-ವಿಲೇವಾರಿ ಮಾಡಿದ್ದೇವೆ. ಅವುಗಳಲ್ಲಿ 740 ಅಂಚೆ ಬಾಕ್ಸ್ ಗಳು ಬೆಂಗಳೂರಿನದ್ದಾಗಿವೆ ಎಂದು ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ ವಿ ತಾರಾ ತಿಳಿಸಿದ್ದಾರೆ.

ಪ್ರಮುಖ ನಗರಗಳಲ್ಲಿ ಇ-ಕ್ಲಿಯರೆನ್ಸ್ ನ್ನು ಆರಂಭದಲ್ಲಿ ಪ್ರಯೋಗ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ಸಹ ವಿಸ್ತರಿಸಲಾಗುವುದು. ಡೆಲಿವರಿ ಬಾಕ್ಸ್ ನ ಒಳಭಾಗದಲ್ಲಿ ಬಾರ್ ಕೋಡ್ ನ್ನು ಹಚ್ಚಲಾಗುತ್ತದೆ. ನಿರ್ದಿಷ್ಟ ವಿಲೇವಾರಿ ಪೆಟ್ಟಿಗೆಯಿಂದ ಪತ್ರಗಳನ್ನು ಸಂಗ್ರಹಿಸಿದ ನಂತರ ಕೋಡ್ ನ್ನು ಗ್ರಾಹಕರು ತಮ್ಮ ಫೋನ್ ಗಳಲ್ಲಿ ಸಾಫ್ಟ್ ವೇರ್ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT