ರಾಜ್ಯ

ಮದುವೆ ಒಲ್ಲೆ ಎಂದ ಯುವತಿ ಕಿಡ್ನಾಪ್ ಮಾಡಿ ಕಾರಲ್ಲೇ ತಾಳಿ ಕಟ್ಟಿದ ಯುವಕ!

Nagaraja AB

ಹಾಸನ: ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಅಪಹರಿಸಿದ ಯುವಕನೊಬ್ಬ ಕಾರಿನಲ್ಲಿಯೇ ತಾಳಿ ಕಟ್ಟಿರುವ ಘಟನೆ ನಡೆದಿದೆ. ಮನು ಎಂಬ ಈ ಯುವಕ ಈ ಕೃತ್ಯವೆಸಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ  ಸುದ್ದಿ ಸಖತ್ ವೈರಲ್ ಆಗಿದೆ.

ಅರಸೀಕೆರ ತಾಲೂಕ್ ಕುಡುಕುಂದಿ ಗ್ರಾಮದ ಮನು ತನ್ನ ಅತ್ತೆ ಮಗಳನ್ನು ಇಷ್ಟಪಡುತ್ತಿದ್ದ ಎನ್ನಲಾಗಿದೆ. ಆದರೆ, ಯುವತಿ ಮದುವೆಯಾಗಲು ನಿರಾಕರಿಸಿದ್ದಳು. ಇದರಿಂದಾಗಿ ಚಂಚಲಗೊಂಡ ಮನು, ತನ್ನ ಸ್ನೇಹಿತರ ನೆರವಿಂದ  ಬಲವಂತದಿಂದ ಯುವತಿಯನ್ನು ಅಪಹರಿಸಿದ್ದು, ಕಾರಿನಲ್ಲಿಯೇ ತಾಳಿ ಕಟ್ಟಿರುವುದು ತಿಳಿದುಬಂದಿದೆ.

ಘಟನೆ ನಂತರ ಆರೋಪಿ ಹಾಗೂ ಯುವತಿ ಎಲ್ಲಿದ್ದಾರೆ ಎಂಬುದು ತಿಳಿದುಬಂದಿಲ್ಲ. ಯುವತಿಯ ಪೋಷಕರು ದುದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾಪತ್ತೆ ಎಂದು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT