ಸಂಗ್ರಹ ಚಿತ್ರ 
ರಾಜ್ಯ

ಫೆಬ್ರವರಿ 6 ರಿಂದ ಮಾಗಡಿ ರೈತರಿಂದ ಅವರೆ ಮೇಳ

ಮಾಗಡಿ ರೈತರಿಂದ‌ ಅವರೆ ಬೇಳೆ ಹಾಗೂ ಇದರಿಂದ ತಯಾರಿಸಲಾದ ತಿಂಡಿ ತಿನಿಸುಗಳ ಮೇಳವನ್ನು ಫೆ.6 ರಿಂದ 16ರ ವರೆಗೆ ಸಜ್ಜನ್ ರಾವ್ ಸರ್ಕಲ್ ನಲ್ಲಿ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಿಳಿಸಿದೆ.

ಬೆಂಗಳೂರು: ಮಾಗಡಿ ರೈತರಿಂದ‌ ಅವರೆ ಬೇಳೆ ಹಾಗೂ ಇದರಿಂದ ತಯಾರಿಸಲಾದ ತಿಂಡಿ ತಿನಿಸುಗಳ ಮೇಳವನ್ನು ಫೆ.6 ರಿಂದ 16ರ ವರೆಗೆ ಸಜ್ಜನ್ ರಾವ್ ಸರ್ಕಲ್ ನಲ್ಲಿ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಿಳಿಸಿದೆ.

ಸುದ್ದಿ ಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಈ ಮೇಳವನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಉದ್ಘಾಟಿಸಲಿದ್ದು, ಮೇಳವು ರೈತರು ಮತ್ತು ಗ್ರಾಹಕರ ನಡುವೆ ನಡೆಯಲಿದೆ. ಅವರೆ ಬೇಳೆಯಿಂದ ತಯಾರಿಸಿದ 100 ಬಗೆಯ ತಿಂಡಿ ತಿನಿಸುಗಳನ್ನು ಮೇಳದಲ್ಲಿ ಇಡಲಾಗುವುದು ಎಂದರು.

ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಸರ್ಕಾರದ ಜವಾಬ್ದಾರಿ. ಆದರೆ ಸರ್ಕಾರ ರೈತರನ್ನು ಉತ್ತೇಜಿಸುವ ಬದಲು ಅವರ ಅನ್ನ ಕಸಿದುಕೊಳ್ಳುವ ಕೆಲಸ ಮಾಡುತ್ತಿವೆ. ಸಜ್ಜನ್ ರಾವ್ ಸರ್ಕಲ್ ನಲ್ಲಿ ರೈತರು ಮೇಳ ನಡೆಸದಂತೆ ಕೆಲ ಕಾಣದ ಕೈಗಳು ತಡೆ ಹಿಡಿದಿದ್ದು, ಇದು ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಒಂದು ವೇಳೆ ಮೇಳ ನಡೆಯುವುದನ್ನು ತಡೆ ಹಿಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

BJP-RSS ಶಿಸ್ತಿನ ಫೋಟೋ ಹಂಚಿಕೊಂಡು ದಿಗ್ವಿಜಯ್ ಸಿಂಗ್ ವಿವಾದ: ಶಶಿ ತರೂರ್ ಬೆಂಬಲ, ಆಂತರಿಕ ಸುಧಾರಣೆ ಅತ್ಯಗತ್ಯ ಎಂದ ಸಂಸದ

'ಮಧ್ಯಮ ವರ್ಗದವರ ಜೀವನ' ಭಾರತಕ್ಕಿಂತ ಕೆನಡಾದಲ್ಲಿ ಉತ್ತಮವಾಗಿದೆಯೇ? ಚರ್ಚೆ ಹುಟ್ಟುಹಾಕಿದ ಭಾರತೀಯ ವಲಸಿಗ! Video

ರಾಜ್ಯ ಲೋಕಾಯುಕ್ತ ಇತಿಹಾಸದಲ್ಲಿ ಇದೇ ಮೊದಲು! ಭ್ರಷ್ಟಾಚಾರ ಆರೋಪ, ಒಂದೇ ತಾಲೂಕಿನ ಎಲ್ಲಾ '25 ಗ್ರಾಮ ಪಂಚಾಯಿತಿ'ಗಳ ವಿರುದ್ಧ ದೂರು ದಾಖಲು!

ಭಾರತ ತಂಡದಲ್ಲಿ ಆಡಿ 'ಬ್ಯಾನ್ ಶಿಕ್ಷೆ' ಗೊಳಗಾದ 'ಪಾಕಿಸ್ತಾನ'ದ ಖ್ಯಾತ ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ!

ಬೆಂಗಳೂರು: ಕೋಗಿಲು ಬಳಿ ಒತ್ತುವರಿ ತೆರವು, ಕಾಂಗ್ರೆಸ್‌ನಲ್ಲೇ ಅಸಮಾಧಾನ! ಸಿದ್ದರಾಮಯ್ಯಗೆ ಹೈಕಮಾಂಡ್ ನೀಡಿದ ಸಲಹೆ ಏನು?

SCROLL FOR NEXT