ರಾಜ್ಯ

ಬೆಂಗಳೂರು-ಮೈಸೂರು ರಾಷ್ಟ್ರಿಯ ಹೆದ್ದಾರಿ ಕಾಮಗಾರಿ ವೇಳೆ ಮಣ್ಣು ಗುಡ್ಡೆ ಕುಸಿದು ಇಬ್ಬರು ಕಾರ್ಮಿಕರ ಸಾವು

Nagaraja AB

ಮಂಡ್ಯ: ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ವೇಳೆ ಇಬ್ಬರು ಕಾರ್ಮಿಕರು ಮಣ್ಣು ಕುಸಿದು ಮೃತ ಪಟ್ಟಿರುವ ಘಟನೆ ಮದ್ದೂರು ಪಟ್ಟಣದ ಕೃಷಿ ಇಲಾಖೆ ಕಛೇರಿ ಮುಂಭಾಗ ಜರುಗಿದೆ

ಮೃತರನ್ನು ಕಾರ್ಮಿಕರಾದ  ಕಾಶೀನಾಥ್ (36) ಮತ್ತು ರಾಜು ಗಂದ್(30) ಎಂದು ಗುರುತಿಸಲಾಗಿದೆ. ಇವರು ಜಾರ್ಖಂಡ್ ರಾಜ್ಯದ ಛತ್ರ ಜಿಲ್ಲೆಯ ಸೆಷಾಂಗ್ ಗ್ರಾಮದವರು ಎಂದು ತಿಳಿದು ಬಂದಿದೆ.

ಕಾಮಗಾರಿಯ ಪಿಲ್ಲರ್ ತೆಗೆಯುವ ವೇಳೆಯಲ್ಲಿ ಇಬ್ಬರು ಕಾರ್ಮಿಕರಿಗೆ ಬೃಹತ್ ಮಣ್ಣಿನ ದಿಬ್ಬ ಕುಸಿದಿದೆ ತಕ್ಷಣವೇ ಇಬ್ಬರು ಕಾರ್ಮಿಕರನ್ನು ಹೊರ ತೆಗೆದು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ಮಾರ್ಗ ಮಧ್ಯೆದಲ್ಲಿ ಮೃತ ಪಟ್ಟಿದ್ದಾರೆ

ಶವಗಳನ್ನು ಮರಣೋತ್ತರ ಪರೀಕ್ಷೆಗೆ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಇಡಲಾಗಿದ್ದು ಮದ್ದೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ

ವರದಿ- ನಾಗಯ್ಯ 

SCROLL FOR NEXT