ಈಶ್ವರ ಖಂಡ್ರೆ 
ರಾಜ್ಯ

ಶಾಹೀನ್ ಶಾಲಾ ಪ್ರಕರಣ ಹಿಂಪಡೆದು ಬಂಧಿತರನ್ನು ರಿಲೀಸ್ ಮಾಡಿ- ಯಡಿಯೂರಪ್ಪಗೆ ಈಶ್ವರ್ ಖಂಡ್ರೆ ಪತ್ರ

ಬೀದರ್ ಶಾಹೀನ್    ಶಾಲಾ ಪ್ರಕರಣ ಹಿಂಪಡೆದು ಬಂಧಿತರನ್ನು ಬಿಡುಗಡೆಗೊಳಿಸುವಂತೆ ಹಾಗೂ 2019-20ರ ಬಜೆಟ್‌ನಲ್ಲಿ ಬೀದರ್‌ ಅಭಿವೃದ್ಧಿಗೆ ಘೋಷಿಸಲಾಗಿದ್ದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ. 

ಬೆಂಗಳೂರು: ಬೀದರ್ ಶಾಹೀನ್    ಶಾಲಾ ಪ್ರಕರಣ ಹಿಂಪಡೆದು ಬಂಧಿತರನ್ನು ಬಿಡುಗಡೆಗೊಳಿಸುವಂತೆ ಹಾಗೂ 2019-20ರ ಬಜೆಟ್‌ನಲ್ಲಿ ಬೀದರ್‌ ಅಭಿವೃದ್ಧಿಗೆ ಘೋಷಿಸಲಾಗಿದ್ದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ.

ಹಿಂದುಳಿದ ಬೀದರ್ ಜಿಲ್ಲೆಯಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆ ಕಳೆದ ಹತ್ತಾರು ವರ್ಷದಿಂದ ಜಿಲ್ಲೆಯಲ್ಲಿ ಉತ್ತಮಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಜ.21 ರಂದು ನಾಟಕದಲ್ಲಿ ಮೋದಿ ಅವರನ್ನು ವಿದ್ಯಾರ್ಥಿಗಳು ನಿಂದಿಸಿದ್ದನ್ನೂ ಸಮರ್ಥಿಸುತ್ತಿಲ್ಲವಾದರೂ ಗುಬ್ಬಿಯ ಮೇಲೆ ಬ್ರಾಹ್ಮಾಸ್ತ್ರ ಎನ್ನುವಂತೆ ಶಾಲೆಯ ಮುಖ್ಯಶಿಕ್ಷಕಿ ಹಾಗೂ ವಿದ್ಯಾರ್ಥಿನಿ ತಾಯಿಯನ್ನು ಬಂಧಿಸಿರುವುದು ಸರಿಯಲ್ಲ ಎಂಧರು.

ಅವರ ಮೇಲೆ ದುರುದ್ದೇಶಪೂರಕ ದಾಖಲಿಸಿರುವ ದೇಶದ್ರೋಹ ಕೇಸ್ ವಾಪಸ್ ಪಡೆಯಬೇಕು.ತನಿಖಾಧಿಕಾರಿಗಳು ಸ್ಕೂಲ್ ಗೆ ಹೋಗಿ ತನಿಖೆ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳು ಭಯ ಭೀತಿಗೊಂಡಿದ್ದಾರೆ.ಪ್ರಕರಣ ಹಿಂಪಡೆದು ಶಿಕ್ಷಕಿ ಮತ್ತು ವಿದ್ಯಾರ್ಥಿನಿ ತಾಯಿಯನ್ನು ಬಿಡುಗಡೆ ಮಾಡುವಂತೆ ಪತ್ರದಲ್ಲಿ ಖಂಡ್ರೆ ಒತ್ತಾಯಿಸಿದ್ದಾರೆ.

2019-20ನೇ ಸಾಲಿನ ಬಜೆಟ್ ವಿಶೇಷ ಪ್ಯಾಕೆಜ್ ಅಡಿ ಬೀದರ್ ಅಭಿವೃದ್ಧಿಗೆ 300ಕೋಟಿ ರೂ.ಮಂಜೂರಾಗಿತ್ತು.ಬರಗಾಲದಿಂದ ಜಿಲ್ಲೆಯಲ್ಲಿ ನೀರಿನ ತೊಂದರೆ ತಲೆದೋರಿದ್ದು ತಕ್ಷಣವೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಈಶ್ವರ್ ಖಂಡ್ರೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT