ಮಾಜಿ ಪತ್ನಿ ನಿವಾಸದ ಮುಂದೆ ಅಧಿಕಾರಿಯ ಧರಣಿ 
ರಾಜ್ಯ

ಐಪಿಎಸ್ v/s ಐಪಿಎಸ್: ಬೀದಿಗೆ ಬಂತು ಪೊಲೀಸ್ ಅಧಿಕಾರಿಗಳ ಕೌಟುಂಬಿಕ ಕಲಹ

ಹೆಂಡತಿ ನನ್ನ ಮಕ್ಕಳ ಮುಖ ನೋಡಲು ಬಿಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಮೂಲದ ಐಪಿಎಸ್​ ಅಧಿಕಾರಿ ಅರುಣ್ ರಂಗರಾಜನ್ ಬೆಂಗಳೂರಿನಲ್ಲಿರುವ  ಮಾಜಿ ಪತ್ನಿಯ ಸರ್ಕಾರಿ ನಿವಾಸದ ಮುಂದೆ ಭಾನುವಾರ ಸಂಜೆಯಿಂದ ಧರಣಿ ಕುಳಿತಿದ್ದರು.

ಬೆಂಗಳೂರು: ಹೆಂಡತಿ ನನ್ನ ಮಕ್ಕಳ ಮುಖ ನೋಡಲು ಬಿಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಮೂಲದ ಐಪಿಎಸ್​ ಅಧಿಕಾರಿ ಅರುಣ್ ರಂಗರಾಜನ್ ಬೆಂಗಳೂರಿನಲ್ಲಿರುವ  ಮಾಜಿ ಪತ್ನಿಯ ಸರ್ಕಾರಿ ನಿವಾಸದ ಮುಂದೆ ಭಾನುವಾರ ಸಂಜೆಯಿಂದ ಧರಣಿ ಕುಳಿತಿದ್ದರು.

ತಮಿಳುನಾಡು ಮೂಲದ ಅರುಣ್ ರಂಗರಾಜನ್ ಮತ್ತು ಇಲಕಿಯಾ ಕರುಣಾಕರನ್ ಬೆಂಗಳೂರಿನಲ್ಲಿ ವಿವಿಐಪಿ ಭದ್ರತಾ ಡಿಸಿಪಿ ಅವರನ್ನು ಕೆಲವು ವರ್ಷಗಳ ಹಿಂದೆ ವಾವಹವಾಗಿದ್ದರು.

ಅರುಣ್ ರಂಗರಾಜನ್ ಕಲಬುರ್ಗಿಯ ಐಎಸ್​ಡಿಯಲ್ಲಿ ಎಸ್​ಪಿಯಾಗಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಇವರಿಗೆ ಮಗುವಾದ ನಂತರ ಭಿನ್ನಾಭಿಪ್ರಾಯಗಳು ಉಂಟಾಗಿತ್ತು. ಇದೇ ಕಾರಣಕ್ಕೆ ವಿಚ್ಛೇದನ ಪಡೆದಿದ್ದ ಅವರು ನಂತರ ಮತ್ತೆ ಒಂದಾಗಿ ಬಾಳಲು ನಿರ್ಧರಿಸಿದ್ದರು. 

ಅದಾದ ನಂತರ ಮತ್ತೊಂದು ಮಗುವಾಗಿತ್ತು. ಆದರೆ,ಕೆಲವು ದಿನಗಳಿಂದ ಹೆಂಡತಿ ತನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾಳೆ, ಮಕ್ಕಳ ಮುಖ ನೋಡಲು ಬಿಡುತ್ತಿಲ್ಲ ಎಂದು ಅರುಣ್ ರಂಗರಾಜನ್ ಆರೋಪಿಸಿದ್ದರು.

ನಾನು ಮಕ್ಕಳನ್ನು ನೋಡಲು  ಬಂದೆ, ಆದರೆ ಮಹಿಳಾ ಹೋಮ್ ಗಾರ್ಡ್ಸ್ ಗಳಿಂದ ನನ್ನನ್ನು ಮನೆಯಿಂದ ಹಾಕಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಕ್ಕಳನ್ನು ನೋಡಲು  ರಜೆ ಹಾಕಿ ಬಂದಿದ್ದೆ, ಆಕೆ ವಸತ್ ನಗರದಲ್ಲಿ ಮಕ್ಕಳ ಜೊತೆ ವಾಸವಿದ್ದಾರೆ,  ನಾನು ನನ್ನ ಮಕ್ಕಳನ್ನು ನೋಡಲು ಬಂದ ವೇಳೆ, ಆಕೆ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿ ನನ್ನ ವಿರುದ್ಧ ದೂರು ನೀಡಿದ್ದಾರೆ, ನಾನು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT