ರಾಜ್ಯ

ಮಂಡ್ಯ: ಕಾವೇರಿ ನದಿಯಲ್ಲಿ ಈಜಲು ಹೋದ ಮೂವರು ಯುವಕರು ನೀರು ಪಾಲು

Srinivas Rao BV

ಮಂಡ್ಯ: ಕಾವೇರಿ ನದಿಯಲ್ಲಿ ಈಜಲು ಹೋದ ಮೂವರು ಯುವಕರು ಜಲ ಸಮಾಧಿ ಯಾಗಿರುವ ಘಟನೆ ಶ್ರೀರಂಗಪಟ್ಟಣದ ರೈಲ್ವೆ ನಿಲ್ದಾಣದ ಬಳಿಯ ಕಾವೇರಿ ನದಿಯಲ್ಲಿಂದು ನಡೆದಿದೆ.

ಮುಜಾಸಿಮ್ ಅಹಮದ್(18) ತೌಸೀಫ್(17)ಇಫ್ತಿಹಾರ್(18) ಮೃತ ದುರ್ದ್ಯವಿಗಳಾಗಿದ್ದು ಮೃತರೆಲ್ಲರು ಹಾಸನದ ಅರಸೀಕೆರೆ ಮೂಲದವರಾಗಿದ್ದು ಮೈಸೂರಿನ ಸಿದ್ದಿಕ್ ಮೊಹಲ್ಲಾದ ತಾರುಮುಲ್ಲಾ ಸಿದ್ದಿಕ್ ಟ್ರಸ್ಟ್ ನಲ್ಲಿ ಅರೇಬಿಕ್ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 

ಇಂದು ಮೀನು ಹಿಡಿಯಲು ಬಂದಿದ್ದವರು ಈಜಲು ಹೋಗಿದ್ದ ವೇಳೆ  ಮೃತ ಪಟ್ಟಿರಬಹುದೆಂದ ಪೊಲೀಸರು ಶಂಕೆವ್ಯಕ್ತಪಡಿಸಿದ್ದಾರೆ. ಮೂವರಲ್ಲಿ ಮುಜಾಸೀಮ್ ಶವ ಬೆಳಿಗ್ಗೆ ಪತ್ತೆಯಾಗಿದ್ದು ಉಳಿದ ಇಬ್ಬರ ಶವಗಳು ಮಧ್ಯಾಹ್ನದ ಬಳಿಕ ಪತ್ತೆಯಾಗಿವೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ನಾಗಯ್ಯ

SCROLL FOR NEXT