ರಾಜ್ಯ

ಮಕ್ಕಳ ಯೋಗಕ್ಷೇಮ ಸಮೀಕ್ಷೆಯಲ್ಲಿ ಭಾರತಕ್ಕೆ 131ನೇ ಸ್ಥಾನ 

ಮಗುವನ್ನು ಆರೋಗ್ಯಕರ ವಾತಾವರಣ ಮತ್ತು ಉತ್ತಮ ಭವಿಷ್ಯದಡಿಯಲ್ಲಿ ದೇಶಗಳು ಬೆಳೆಸುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆಯ ವರದಿ ತಿಳಿಸಿದೆ ಎಂದು ಬ್ರಿಟನ್ ನ ಆರೋಗ್ಯ ಸಂಶೋಧನೆ ಪತ್ರಿಕೆ ಲ್ಯಾನ್ಸೆಟ್ ಮತ್ತು ಯುನಿಸೆಫ್ ತಿಳಿಸಿದೆ.

ಬೆಂಗಳೂರು: ಮಗುವನ್ನು ಆರೋಗ್ಯಕರ ವಾತಾವರಣ ಮತ್ತು ಉತ್ತಮ ಭವಿಷ್ಯದಡಿಯಲ್ಲಿ ದೇಶಗಳು ಬೆಳೆಸುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆಯ ವರದಿ ತಿಳಿಸಿದೆ ಎಂದು ಬ್ರಿಟನ್ ನ ಆರೋಗ್ಯ ಸಂಶೋಧನೆ ಪತ್ರಿಕೆ ಲ್ಯಾನ್ಸೆಟ್ ಮತ್ತು ಯುನಿಸೆಫ್ ತಿಳಿಸಿದೆ.

ಈ ವರದಿಯಲ್ಲಿ ಭಾರತಕ್ಕೆ 77ನೇ ಸ್ಥಾನ ಸಿಕ್ಕಿದೆ. ಒಟ್ಟು 180 ದೇಶಗಳ ಬಗ್ಗೆ ಈ ಅಧ್ಯಯನ ಮಾಡಲಾಗಿದ್ದು ಮಕ್ಕಳನ್ನು ಯಾವ ರೀತಿ ಬೆಳೆಸಲಾಗುತ್ತಿದೆ ಎಂದು ಪರಿಗಣಿಸಲಾಗಿದೆ. 40 ಮಕ್ಕಳು ಮತ್ತು ವಯಸ್ಕರ ಮೇಲೆ ಈ ಅಧ್ಯಯನ ನಡೆಸಲಾಗಿದೆ. 

ವರದಿಯಲ್ಲಿ ಏನು ಹೇಳಲಾಗಿದೆ: 

ದೇಶಗಳು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಪರಿಸರ ರಕ್ಷಣೆ ಎಂದರೆ ಹವಾಮಾನ ಬದಲಾವಣೆ ಮಾತ್ರವಲ್ಲ. ಮಕ್ಕಳಲ್ಲಿ ಅಪೌಷ್ಟಿಕತೆ, ಹಿಂಸಾತ್ಮಕ ಜಾಹೀರಾತು, ಸಿನೆಮಾ ವೀಕ್ಷಣೆ, ಸೋಂಕು ರೋಗಗಳಿಗೆ ಒಡ್ಡುವುದು, ಜಾಗತಿಕ ತಾಪಮಾನ ಈ ಎಲ್ಲಾ ವಿಷಯಗಳು ಸೇರುತ್ತದೆ. ಇವೆಲ್ಲವೂ ನೋಡಿದರೆ ಇಂದಿನ ಮಕ್ಕಳಿಗೆ ಸರಿಯಾದ ಆರೋಗ್ಯ, ಪರಿಸರ, ಪೋಷಕರಿಂದ ಭವಿಷ್ಯದ ಬಗ್ಗೆ ಸೂಕ್ತ ಕಾಳಜಿ ಸಿಗುತ್ತಿಲ್ಲ ಎನ್ನುತ್ತಾರೆ ವಿಜ್ಞಾನಿ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಜೆ ಗೌಡ.

ಜಗತ್ತಿನಲ್ಲಿ 2 ಬಿಲಿಯನ್ ಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಮಾನವೀಯ ಸಂಘರ್ಷ, ನೈಸರ್ಗಿಕ ವಿಕೋಪ, ಹವಾಮಾನ ಬದಲಾವಣೆ, ಅಭಿವೃದ್ಧಿಗೆ ಹಿನ್ನಡೆಯಾಗಿರುವ ಘಟನೆಗಳು ನಡೆಯುತ್ತಿರುತ್ತದೆ ಎಂದು ವರದಿ ಹೇಳುತ್ತದೆ.ಇಂದಿನ ಮಾಧ್ಯಮಗಳು, ಪ್ರಚಾರ, ಜಾಹೀರಾತುಗಳು ಮಕ್ಕಳ ಆರೋಗ್ಯಕ್ಕೆ ಮತ್ತು ಅವರ ಭವಿಷ್ಯಕ್ಕೆ ಕುತ್ತುಂಟುಮಾಡುತ್ತಿವೆ ಎಂದು ವರದಿ ಹೇಳಿದೆ.

ವರದಿಯ ಪ್ರಕಾರ, ಸುಸ್ಥಿರತೆ ಸೂಚ್ಯಂಕದಲ್ಲಿ ಭಾರತವು 77 ನೇ ಸ್ಥಾನದಲ್ಲಿದೆ ಮತ್ತು ತಲಾ ಇಂಗಾಲದ ಹೊರಸೂಸುವಿಕೆಯನ್ನು ಗಣನೆಗೆ ತೆಗೆದುಕೊಂಡರೆ 180 ದೇಶಗಳಲ್ಲಿ ಭಾರತ 131ನೇ ಸ್ಥಾನದಲ್ಲಿದೆ, ಇದು ಮಕ್ಕಳ ಉಳಿವು ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಅಳತೆ ಮಾಡುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT