ಬನಶಂಕರಿ ಸುತ್ತಲಿನ ಪ್ರದೇಶದಲ್ಲಿ ಕಾಣುತ್ತಿರುವ ಹೌದ್ದ ಹುಲಿಯಾ ನಾಟಕದ ಬ್ಯಾನರ್ 
ರಾಜ್ಯ

ಬಾದಾಮಿ: ಬನಶಂಕರಿ ಜಾತ್ರೆಯಲ್ಲಿ ಸಿದ್ದು ಹವಾ, ಸದ್ದು ಮಾಡುತ್ತಿದೆ “ಹೌದ್ದ ಹುಲಿಯಾ” ನಾಟಕ

ನಾಡಿನ ಪ್ರತಿಷ್ಠಿತ ಜಾತ್ರೆಗಳಲ್ಲೊಂದಾದ ಬಾದಾಮಿ ಬನಶಂಕರಿ ದೇವಿಯ ತಿಂಗಳ ಜಾತ್ರೆಗೆ ದಿನಗಣನೆ ಆರಂಭಗೊಂಡಿವೆ. ಖಡಕ್ ರೊಟ್ಟಿ, ಭಜಿ, ಚಟ್ನಿ ಊಟದ ಭರಾಟೆ ಈಗಲೇ ಶುರುವಾಗಿದೆ.

ಬಾಗಲಕೋಟೆ: ನಾಡಿನ ಪ್ರತಿಷ್ಠಿತ ಜಾತ್ರೆಗಳಲ್ಲೊಂದಾದ ಬಾದಾಮಿ ಬನಶಂಕರಿ ದೇವಿಯ ತಿಂಗಳ ಜಾತ್ರೆಗೆ ದಿನಗಣನೆ ಆರಂಭಗೊಂಡಿವೆ. ಖಡಕ್ ರೊಟ್ಟಿ, ಭಜಿ, ಚಟ್ನಿ ಊಟದ ಭರಾಟೆ ಈಗಲೇ ಶುರುವಾಗಿದೆ.

ನಾಟಕ ಕಂಪನಿಗಳ ಪಾಲಿಗೆ ವರ್ಷದ “ಅನ್ನ” ಎನ್ನುವ ಮಾತು ಜನಜನಿತವಾಗಿದೆ. ಇಲ್ಲಿ ಹಿಟ್ ಆಗುವ ನಾಟಕಗಳು ನೂರಾರು ಪ್ರದರ್ಶನ ಕಂಡಿವೆ. ಇತ್ತೀಚಿನ ವರ್ಷಗಳಲ್ಲಿ ರಂಗಕರ್ಮಿ ಎನ್. ರಾಜಣ್ಣ ಅವರ ಜೇವರ್ಗಿ ನಾಟಕ ಕಂಪನಿಯ ‘ಶೆರೆ ಸಂಗವ್ವ’ ನಾಟಕ ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡು ಕೋಟಿ ರೂ. ಗಳಿಸಿ ದಾಖಲೆ ಮಾಡಿದೆ. ಹೀಗೆ ಪ್ರತಿ ವರ್ಷ ಇಲ್ಲಿ ಯಾವುದಾದರೂ ಒಂದು ನಾಟಕ ಹೆಚ್ಚು ಜನಪ್ರಿಯತೆ ಗಳಿಸಿ ನೂರಾರು ಪ್ರದರ್ಶಗಳನ್ನು ಕಂಡಿವೆ. 

ಇದುವರೆಗೂ ಇಲ್ಲಿ ಜಾತ್ರೆಯ ಮುನ್ನಾ ದಿನದಿಂದ ನಾಟಕಗಳ ಪ್ರದರ್ಶನ ಆರಂಭಗೊಂಡ ಬಳಿಕ ಒಂದೆರಡು ದಿನಗಳಲ್ಲೇ ಇಂತಹ ನಾಟಕ ಭಾರಿ ಇದೆ ಎನ್ನುವ ಮೆಚ್ಚುಗೆ ಮಾತು ಶುರುವಾಗುತ್ತಲೇ ಆ ನಾಟಕ ಜಾತ್ರೆಗೆ ಬರುವ ಭಕ್ತರನ್ನು ತನ್ನತ್ತ ಸೇಳೆಯತ್ತದೆ. ಇದು ಪ್ರತಿ ವರ್ಷದ ಮಾತು ಆದರೆ ಈ ಬಾರಿ ಜಾತ್ರೆಯಲ್ಲಿ ನಾಟಕಗಳ ಪ್ರದರ್ಶನಕ್ಕೆ ಟೆಂಟ್ ಹಾಕುವ ಕೆಲಸ ನಡೆದಿದೆ. ಈಗಲೇ “ಹೌದ್ದ ಹುಲಿಯಾ” ನಾಟಕ ಪ್ರದರ್ಶನಗೊಳ್ಳಲಿದೆ ಎನ್ನುವುದು ಭಾರಿ ಹವಾ ಸೃಷ್ಟಿ ಮಾಡಿದೆ. ಇದಕ್ಕೆ ಕಾರಣವೂ ಇದೆ. 

ರಾಜ್ಯದಲ್ಲಿ ಡಿಸೆಂಬರ್‌ನಲ್ಲಿ ನಡೆದ ಉಪಚುನಾವಣೆ ವೇಳೆ ಬಾದಾಮಿ ಶಾಸಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಹಿರಂಗ ಪ್ರಚಾರ ಸಭೆಯಲ್ಲೊಬ್ಬ ಅಭಿಮಾನಿ “ಹೌದ್ದ ಹುಲಿಯಾ” ಎಂದು ಕೂಗಿದ್ದು, ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ರಾಜಕಾರಣದ ಹೊಸ ಅಲೆ ಸೃಷ್ಟಿಸಿತ್ತು. ಹೌದ್ದ ಹುಲಿಯಾ ಎಂದು ಕೂಗಿದ ವ್ಯಕ್ತಿ ಸಾಮಾಜಿಕ ಜಾಲ ತಾಣದಲ್ಲಿ, ಮಾಧ್ಯಮಗಳಲ್ಲಿ ಭಾರಿ ಹವಾ ಮಾಡಿದ್ದ ಕೂಡ ಗಮನಾರ್ಹ.

ಇಂದಿಗೂ “ಹೌದ್ದ ಹುಲಿಯಾ”ಎನ್ನುವುದು ಸಭೆ ಸಮಾರಂಭಗಳಲ್ಲಿ ಮನೆ ಮಾತಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇದು ಭಾರಿ ಇಮೇಜ್ ತಂದು ಕೊಟ್ಟಿದ್ದಂತೂ ನಿಜ.

ಈಗ ಅವರದೇ ಕ್ಷೇತ್ರದ ಬಾದಾಮಿ ಬನಶಂಕರಿ ದೇವಿ ಜಾತ್ರೆಯಲ್ಲಿ “ಹೌದ್ದ ಹುಲಿಯ” ಹೆಸರಿನ ನಾಟಕ ಪ್ರದರ್ಶನಕ್ಕೆ ಸಜ್ಜಾಗಿದ್ದು, ಈಗಲೇ ಭಾರಿ ಅಲೇ ಸೃಷ್ಟಿಸಿದೆ. ನಾಟಕ ಪ್ರೇಮಿಗಳಲ್ಲಿ ಕಾತರವನ್ನು ಮೂಡಿಸಿದೆ. ಪ್ರದರ್ಶನಕ್ಕೂ ಮೊದಲೇ ಸಾಕಷ್ಟು ಹೆಸರು ಮಾಡಿರುವ ಮೊದಲ ನಾಟಕ ಇದಾಗಿದೆ.

ಬಾದಾಮಿ ಸಿದ್ದರಾಮಯ್ಯನವರು ಪ್ರತಿನಿಧಿಸುತ್ತಿರುವ ಕ್ಷೇತ್ರವಾಗಿರುವುದರಿಂದ ಈ ವರ್ಷ ಇದು ಅತೀ ಹೆಚ್ಚು ಪ್ರದರ್ಶಗಳನ್ನು ಕಂಡು ಜಾತ್ರೆಯ “ರಂಗಭೂಮಿ ಇತಿಹಾಸ”ದಲ್ಲಿ ಹೊಸ ದಾಖಲೆ ಬರೆಯುವ ಸಾಧ್ಯತೆಗಳು ನಿಚ್ಚಳವಾಗಿದ್ದು, ಸಿದ್ದರಾಮಯ್ಯನವರ ಪಾತ್ರಧಾರಿ ಯಾರು?, ಪೀರಪ್ಪನ ಪಾತ್ರಧಾರಿ ಯಾರು ಎನ್ನುವುದು ಕೂಡಾ ಚರ್ಚೆಯ ವಿಷಯವಾಗಿದೆ. 
ಈಗಲೇ ಇಷ್ಟೆಲ್ಲ ಸದ್ದು ಮಾಡುತ್ತಿರುವ ಕಮತಗಿ ಹುಚ್ಚೇಶ್ವರ ನಾಟ್ಯ ಸಂಘದ ಕಲಾವಿದರಿಂದ ನಾಟಕ ಪ್ರದರ್ಶನ ಹೇಗೆ ನಡೆಯಲಿದೆ ಎನ್ನುವುನ್ನು ಕಾಯ್ದು ನೋಡಬೇಕಷ್ಟೆ.
-ವಿಠ್ಠಲ ಆರ್. ಬಲಕುಂದಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT