ವಿವಾಹ ಬಂಧನಕ್ಕೊಳಗಾದ ಜೋಡಿ 
ರಾಜ್ಯ

ಗದಗ್ ನಲ್ಲಿ ವಿಶಿಷ್ಟ ಮದುವೆ: ಹಿಂದೂ, ಮುಸ್ಲಿಂ, ಕ್ರೈಸ್ತ ಮುಖಂಡರು ಸಮ್ಮುಖದಲ್ಲಿ ವಿವಾಹ ಬಂಧನಕ್ಕೊಳಗಾದ ಜೋಡಿ 

ಇದೊಂದು ವಿಶಿಷ್ಟ ರೀತಿಯ ಮದುವೆ. ಅಲ್ಲಿ ಪುರೋಹಿತರಿರಲಿಲ್ಲ, ಮಂತ್ರ ಘೋಷಗಳಿರಲಿಲ್ಲ. ಯಾವುದೂ ಇರಲಿಲ್ಲ. ಬ್ಯಾಂಡ್ ಗಳ ಸದ್ದಿಲ್ಲ, ಅಲ್ಲಿದ್ದದ್ದು ಹಿಂದೂ-ಮುಸ್ಲಿಂ ಮತ್ತು ಕ್ರಿಸ್ತಿಯನ್ ಧರ್ಮದ ಮುಖಂಡರು ನೂತನ ಜೋಡಿಗೆ ಮುನ್ನುಡಿಯನ್ನು ಹೇಳಿಕೊಟ್ಟರು. ನಂತರ ಪುಸ್ತಕವೊಂದನ್ನು ಬಿಡುಗಡೆ ಮಾಡಲಾಯಿತು. 

ಗದಗ: ಇದೊಂದು ವಿಶಿಷ್ಟ ರೀತಿಯ ಮದುವೆ. ಅಲ್ಲಿ ಪುರೋಹಿತರಿರಲಿಲ್ಲ, ಮಂತ್ರ ಘೋಷಗಳಿರಲಿಲ್ಲ. ಯಾವುದೂ ಇರಲಿಲ್ಲ. ಬ್ಯಾಂಡ್ ಗಳ ಸದ್ದಿಲ್ಲ, ಅಲ್ಲಿದ್ದದ್ದು ಹಿಂದೂ-ಮುಸ್ಲಿಂ ಮತ್ತು ಕ್ರಿಸ್ತಿಯನ್ ಧರ್ಮದ ಮುಖಂಡರು ನೂತನ ಜೋಡಿಗೆ ಮುನ್ನುಡಿಯನ್ನು ಹೇಳಿಕೊಟ್ಟರು. ನಂತರ ಪುಸ್ತಕವೊಂದನ್ನು ಬಿಡುಗಡೆ ಮಾಡಲಾಯಿತು.


ಬಸವರಾಜ್ ಬೈಯಾಲಿ ಮತ್ತು ಸಂಗೀತಾ ಗುಡಿಮನಿ ಗದಗ್ ನ ಅಂಬೇಡ್ಕರ್ ಭವನದಲ್ಲಿ ಸತಿ-ಪತಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ, ಮೌಲ್ವಿ ಶಬ್ಬೀರ್ ಮೌಲಾನಾ ಮತ್ತು ಫಾದರ್ ಎಬಿನಜೊರ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ನೂತನ ವಧೂ ವರರಿಗೆ ಶುಭ ಹಾರೈಸಿದರು. ಮದುವೆ ಶಾಸ್ತ್ರ ಮುಗಿದ ಮೇಲೆ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. 


ಬಸವರಾಜ್ ಮತ್ತು ಸಂಗೀತಾ ಅವರು ತಮ್ಮ ವಿವಾಹವನ್ನು ವಿನೂತನವಾಗಿ ಮಾಡಬೇಕೆಂದು ಯೋಚಿಸುತ್ತಿದ್ದಾಗ ಹಿರಿಯ ಬರಹಗಾರ ಬಸವರಾಜ್ ಸುಳಿಬಾವಿ ಅವರನ್ನು ಸಂಪರ್ಕಿಸಿ ಮದುವೆಯನ್ನು ಸರಳವಾಗಿ ನಡೆಸಬೇಕೆಂದು ನಿರ್ಧರಿಸಿದರು.


ಬುದ್ಧ ಮತ್ತು ಬಸವಣ್ಣನ ಮೂರ್ತಿ ಮುಂದೆ ವಧೂ-ವರರಿಬ್ಬರೂ ನಿಂತು ಮುನ್ನುಡಿ ಹೇಳಿಕೊಂಡರು. ನಂತರ ವಚನವನ್ನು ಪಠಿಸಿದರು. ಅತಿಥಿಗಳು ವಧೂ ವರರನ್ನು ಅಕ್ಷತೆ ಬದಲಾಗಿ ಹೂವಿನಿಂದ ಆಶೀರ್ವದಿಸಿ ಊಠ ಮಾಡಿಕೊಂಡು ಹೋದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT