ಜೋಶಿ ಕುಟುಂಬಸ್ಥರೊಂದಿಗೆ ಅಮಿತ್ ಶಾ 
ರಾಜ್ಯ

'ಜೋಶಿ' ನಿವಾಸದಲ್ಲಿ ಮೆಚ್ಚಿನ ಒಗ್ಗರಣೆ ಅವಲಕ್ಕಿ, ತುಪ್ಪದ ದೋಸೆ ಸವಿದ ' ಅಮಿತ್ ಶಾ'

ರಾಜ್ಯದಲ್ಲಿ ಪ್ರವಾಸ ಮುಗಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಗೆ ಹಿಂತಿರುಗುವ ಮುನ್ನ ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಭೇಟಿ ನೀಡಿ ಉಪಾಹಾರ ಸೇವಿಸಿದರು.

ಬೆಂಗಳೂರು: ರಾಜ್ಯದಲ್ಲಿ ಪ್ರವಾಸ ಮುಗಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಗೆ ಹಿಂತಿರುಗುವ ಮುನ್ನ ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಭೇಟಿ ನೀಡಿ ಉಪಾಹಾರ ಸೇವಿಸಿದರು.

ಭಾನುವಾರ ಬೆಳಗ್ಗೆ ಎಂದಿನಂತೆ ಯೋಗ ಮುಗಿಸಿದ ಶಾ, ಪ್ರಹ್ಲಾದ್ ಜೋಶಿ ಮನೆಯಲ್ಲಿ ಒಗ್ಗರಣೆ ಅವಲಕ್ಕಿ, ಗರಿಗರಿ ತುಪ್ಪದ ದೋಸೆ  ಸವಿದರು. 

ಜೋಶಿ ಪತ್ನಿ ಜ್ಯೋತಿ ಜೋಶಿ ಅಮಿತ್ ಶಾ ಅವರನ್ನು ಆರತಿ ಎತ್ತಿ ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಸಚಿವ ಸೋಮಣ್ಣ, ಬಸವರಾಜ ಬೊಮ್ಮಾಯಿ ಹಾಗೂ ಗೋವಿಂದ ಕಾರಜೋಳ ಉಪಸ್ಥಿತರಿದ್ದರು. ಇದೇ ಮೊದಲ ಬಾರಿಗೆ ಜೋಶಿ ಮನೆಗೆ ಭೇಟಿ ನೀಡಿದ್ದ ಶಾ, ತಮ್ಮ ಮೆಚ್ಚಿನ ಕಾಫಿ ಸೇವಿಸಿ ಬೆಳಗ್ಗೆ 9.20ಕ್ಕೆ ಮನೆಯಿಂದ ತೆರಳಿದರು.

ಅಮಿತ್ ಶಾ ತಮ್ಮ ಕುಟುಂಬದ ಎಲ್ಲರೊಟ್ಟಿಗೂ ಮಾತನಾಡಿದರು,  ಜೊತೆಗೆ ಎಲ್ಲರನ್ನು ವಿಚಾರಿಸಿದರು, ಶಾ ಅವರಿಗಾಗಿ, ಅವಲಕ್ಕಿ, ದೋಸೆ, ಇಡ್ಲಿ, ಉಪ್ಪಿಟ್ಟು ಮಾಡಲಾಗಿತ್ತು ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಅಮಿತ್ ಶಾ ಆಗಮನಕ್ಕೆ ಒಂದು ದಿನದ ಮುಂಚೆ ಜೋಶಿ ಮನೆಯಲ್ಲಿ ಉಪಹಾರಕ್ಕೆ ನಿರ್ಧರಿಸಲಾಯಿತು. ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದು ಮನೆಯವರಿಗೆ ಸಂತೋಷ ತಂದಿದೆ. ಅಮಿತ್ ಶಾ ಅವರು ಜೋಶಿ ಅವರ ಮನೆಗೆ ಆಗಮಿಸುವ ಮುನ್ನವ್ ಅವರ ಝೆಡ್ ಪ್ಲಸ್ ಕೆಟಗರಿಯ ಭದ್ರತಾ ಸಿಬ್ಬಂದಿ, ಅಡುಗೆ ಮನೆಗೆ ಆಗಮಿಸಿ ಅಲ್ಲಿನ ಸ್ವಚ್ಚತೆ ಪರಿಶೀಲಿಸಿ ಹಾಕಿರುವ ಸಾಮಾಗ್ರಿ ಪರೀಕ್ಷಿಸಿ, ನಂತರ ಉಪಹಾರವನ್ನು ಅಮಿತ್ ಶಾಗೆ ನೀಡಲಾಯಿತು ಎಂದು ಮೂಲಗಳಿಂದ ತಿಳಿದು ಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT