ರಾಜ್ಯ

ಬೆಳಗಾವಿ: ಲಾರಿ ಪಲ್ಟಿ, ಚಾಲಕ, ಕ್ಲೀನರ್ ದುರ್ಮರಣ

Raghavendra Adiga

ಚಿಕ್ಕೋಡಿ: ಕಲ್ಲು ತುಂಬಿಕೊಂಡು ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆ ರೈಲ್ವೇ ಹಳಿಯ ಮೇಲೆ ಬಿದ್ದ ಪರಿನಾಮ ಸ್ಥಳದಲ್ಲಿಯೇ ಲಾರಿ ಚಾಲಕ, ಕ್ಲೀನರ್ ಮೃತಪಟ್ಟ ಘಟನೆ ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ನಡೆದಿದೆ

ಬಾಗಲಕೋಟದಿಂದ ಕಾಗವಾಡ ಕಡೆ ಸಂಚಾರ ನಡೆಸುತ್ತಿತ್ತು. ಅಲ್ಲದೇ ಲಾರಿ ಬಿದ್ದ ನಂತರ ಕೆಲ ಹೊತ್ತು ಸಂಚಾರ ಸಮಸ್ಯೆ ಉಂಟಾಗಿತ್ತು

ಮೃತರ ಹೆಸರು ತಿಳಿದು ಬಂದಿಲ್ಲ. ಚಾಲನಕ‌ ನಿದ್ದೆ ತಾಳಲಾರದೇ ನಿಯಂತ್ರಣ ತಪ್ಪಿದ್ದರಿಂದ ಘಟನೆ ನಡೆದಿದೆ ಎಂದು ಶಂಕಿಸಿದ್ದು. ಸ್ಥಳಕ್ಕೆ ಪೊಲೀಸರು ಸಂಚಾರ ಸಮಸ್ಯೆ ಬಗೆಹರಿಸಲು ಹರಸಾಹಸ ಪಟ್ಟರು‌

ಘಟನೆ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

SCROLL FOR NEXT