ರಾಜ್ಯ

ಮಂಡ್ಯ: ಕೌಟುಂಬಿಕ ಕಲಹ, ನಾಲೆಗೆ ಬಿದ್ದು ತಾಯಿ, ಇಬ್ಬರು ಮಕ್ಕಳು ಆತ್ಮಹತ್ಯೆ

Lingaraj Badiger

ಮಂಡ್ಯ: ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಬಳಿ ವಿಶ್ವೇಶ್ವರಯ್ಯ ನಾಲೆಗೆ ಬಿದ್ದು ತಾಯಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

ನಾಲೆಗೆ ಬಿದ್ದ ಮೂವರಲ್ಲಿ ತಾಯಿಯನ್ನು ರಕ್ಷಣೆ ಮಾಡಲಾಯಿತು. ಆದರೆ ತಾಯಿ ಬದುಕುಳಿಯಲಿಲ್ಲ. ತಾಯಿಯ ಜೊತೆ ಬಿದ್ದ ಇಬ್ಬರು ಮಕ್ಕಳು ನಾಲೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮಂಡ್ಯ ತಾಲೂಕಿನ ಹುಳ್ಳೇನಹಳ್ಳಿಯ ಜ್ಯೋತಿ (33), ನಿಸರ್ಗ (7), ಪವನ್(4) ಮೃತ ದುರ್ದೈವಿಗಳು.

ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

SCROLL FOR NEXT