ಹಲ್ಲೆಗೊಳಗಾದ ಕಂಡಕ್ಟರ್ 
ರಾಜ್ಯ

ಮಂಗಳಮುಖಿಯರಿಂದ ನಿರ್ವಾಹಕನ ಮೇಲೆ ಹಲ್ಲೆ

ತಾಲೂಕಿನ ಮರಳಿ ಟೋಲ್​​ಗೇಟ್​​ಗೆ ಟಿಕೆಟ್ ತೆಗಸುವ ವಿಚಾರಕ್ಕೆ  ಮಂಗಳಮುಖಿಯರು ಹಾಗೂ ಕಂಡಕ್ಟರ್​ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ಜುಲಾಯಿ ನಗರದಲ್ಲಿ ನಡೆದಿದೆ.

ಗಂಗಾವತಿ: ತಾಲೂಕಿನ ಮರಳಿ ಟೋಲ್​​ಗೇಟ್​​ಗೆ ಟಿಕೆಟ್ ತೆಗಸುವ ವಿಚಾರಕ್ಕೆ  ಮಂಗಳಮುಖಿಯರು ಹಾಗೂ ಕಂಡಕ್ಟರ್​ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ಜುಲಾಯಿ ನಗರದಲ್ಲಿ ನಡೆದಿದೆ.

ಗಲಾಟೆಯಲ್ಲಿ ಶಿವಮೊಗ್ಗ ಡಿಪೋದ ಕಂಡಕ್ಟರ್ ದಾದೇಸಾಬ್​​ನನ್ನು ಮಂಗಳಮುಖಿಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಶಿವಮೊಗ್ಗದಿಂದ ರಾಯಚೂರಿಗೆ ಹೊರಟಿದ್ದ ಬಸ್​​ನಲ್ಲಿ ಜುಲಾಯಿ ನಗರದಲ್ಲಿ ಮಂಗಳಮುಖಿಯರು ಹತ್ತಿದ್ದಾರೆ‌. ಅಲ್ಲಿಂದ‌ ಮರಳಿಗೆ ಟಿಕೆಟ್ ಕೊಡುವಂತೆ ಕೇಳಿದ್ದಾರೆ. 

ಮರಳಿಗೆ  ಬಸ್​​ಸ್ಟಾಪ್ ಇಲ್ಲ. ಸಿದ್ದಾಪುರ ಟಿಕೆಟ್ ಕೊಡ್ತೀನಿ ಅಂತ ಕಂಡಕ್ಟರ್ ದಾದೇಸಾಬ್ ಹೇಳಿದ್ದಾರೆ. ಇದರಿಂದ ನಮಗೆ ಮರಳಿ ಟೋಲ್ ಗೇಟ್​ಗೆ ಟಿಕೆಟ್ ಕೊಡಲೇಬೇಕು ಎಂದು ಮಂಗಳಮುಖಿಯರು ಪಟ್ಟು ಹಿಡಿದಿದ್ದಾರೆ. ಟಿಕೆಟ್ ನೀಡಲು ನಿರಾಕರಿಸಿದ್ದರಿಂದ ಕಂಡಕ್ಟರ್ ಮುಖಕ್ಕೆ ರಕ್ತ ಬರುವ ಹಾಗೆ ಮಂಗಳಮುಖಿಯರು ಥಳಿಸಿದ್ದಾರೆ ಎನ್ನಲಾಗಿದ್ದು, ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT