ರಾಜ್ಯ

ನಿಪ್ಪಾಣಿ: ಗಾಂಜಾ ಮಾರುತ್ತಿದ್ದ ಮಹಿಳೆ ಬಂಧನ

Raghavendra Adiga

ನಿಪ್ಪಾಣಿ: ಯುವಕರು ಮತ್ತು ಕಾಲೇಜು ವಿದ್ಯಾಥಿ೯ಗಳಿಗೆ ಗಾಂಜಾ ಮಾರುತ್ತಿದ್ದ ಮಹಾರಾಷ್ಟ್ರ ಮೂಲದ ಮಹಿಳೆಯೋವ೯ಳನ್ನು ಜಿಲ್ಲಾ ಅಪರಾಧ ದಳ (ಡಿಸಿಬಿ) ಪೊಲೀಸರು ನಿನ್ನೆ ತಡರಾತ್ರಿ ನಿಪ್ಪಾಣಿಯಲ್ಲಿ ಬಂಧಿಸಿದ್ದಾರೆ.

ಅನಿತಾ ಗಣಪತ ಕಾಳೆ (೪೫)  ಎಂಬಾಕೆಯನ್ನು ಬಂಧಿಸಲಾಗಿದ್ದು  ಬಂಧಿತಳಿಂದ ಸುಮಾರು ಎರಡು ಕೆಜಿ ಒಣಗಿದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. 

ಆರೋಪಿಯು ಮೂಲತ: ಮಹಾರಾಷ್ಟ್ರದ ಪಂಢರಪುರದವಳಾಗಿದ್ದು, ಕಳೆದ ೧೫ ವಷ೯ಗಳಿಂದ ನಿಪ್ಪಾಣಿ ಬಳಿಯ ಚಿಕಲೆ ಗ್ರಾಮದಲ್ಲಿ ವಾಸವಾಗಿದ್ದಳು ಎನ್ನಲಾಗಿದೆ.

ಎಸ್.ಪಿ ಲಕ್ಷ್ಮಣ ನಿಂಬರಗಿ ಅವರ ಮಾಗ೯ದಶ೯ನದಲ್ಲಿ ಸಿಪಿಐ ವೀರೇಶ ದೊಡಮನಿ, ಬಸವೇಶ್ವರ ಠಾಣೆ ಪಿಎಸ್ ಐ ಸುಬ್ಬಾಪುರಮಠ, ಎಎಸ್ ಐ ಆಶೋಕ ಭಜಂತ್ರಿ, ಮುಖ್ಯ ಪೇದೆಗಳಾದ ಎಸ್.ಸಿ.ಅಂಬಡಗಟ್ಟಿ ಮತ್ತು ಕುಮಾರ ಚಿನ್ನುಕೊಪ್ಪಿ ಅವರು ಕಾಯಾ೯ಚರಣೆ ನಡೆಸಿ, ನಿಪ್ಪಾಣಿ ಬಸ್ ನಿಲ್ದಾಣದಲ್ಲಿ ಅವಳನ್ನು ಬಂಧಿಸಿದ್ದಾರೆ.
 

SCROLL FOR NEXT