ಸಾಂದರ್ಭಿಕ ಚಿತ್ರ 
ರಾಜ್ಯ

ಎಚ್ ಸಿ ಜಿ ಆಸ್ಪತ್ರೆಯಲ್ಲಿ ಕೊರೋನಾಗಾಗಿ ಆಯುರ್ವೇದ ಔಷಧಿ ಪ್ರಯೋಗ

ಆಯುಷ್ ಇಲಾಖೆ ಅನುಮೋದನೆ ನಂತರ ಪ್ರಯೋಗ ಆರಂಭವಾಗಲಿದೆ. ಇತ್ತೀಚೆಗೆ, ದ್ಯುತಿ ಬಯೋಸೈನ್ಸ್‌ನ ನಿರ್ದೇಶಕ ಡಾ.ರಾಮಕೃಷ್ಣ ಆಚಾರ್ಯ ಅವರು ಮನೆಯ ಪ್ರತ್ಯೇಕತೆಯಡಿಯಲ್ಲಿ ಕೋವಿಡ್ ರೋಗಿಯ ಮೇಲೆ ಕ್ಲಿನಿಕಲ್ ಪ್ರಯೋಗವನ್ನು ನಡೆಸಿದ್ದರು.

ಬೆಂಗಳೂರು: 15 ಕೊರೋನಾ ರೋಗಿಗಳು ಮತ್ತು 15 ಕೊರೋನೇತರ ರೋಗಿಗಳ ಮೇಲೆ ಎಚ್ ಸಿ ಜಿ ಆಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸೆ ಆರಂಭವಾಗಲಿದೆ.

ಆಯುಷ್ ಇಲಾಖೆ ಅನುಮೋದನೆ ನಂತರ ಪ್ರಯೋಗ ಆರಂಭವಾಗಲಿದೆ. ಇತ್ತೀಚೆಗೆ, ದ್ಯುತಿ ಬಯೋಸೈನ್ಸ್‌ನ ನಿರ್ದೇಶಕ ಡಾ.ರಾಮಕೃಷ್ಣ ಆಚಾರ್ಯ ಅವರು ಮನೆಯ ಪ್ರತ್ಯೇಕತೆಯಡಿಯಲ್ಲಿ ಕೋವಿಡ್ ರೋಗಿಯ ಮೇಲೆ ಕ್ಲಿನಿಕಲ್ ಪ್ರಯೋಗವನ್ನು  ನಡೆಸಿದ್ದರು. ಕೊರೋನಾ ರೋಗಿಗೆ ದಿನಕ್ಕೆ ಮೂರು ಬಾರಿ 9 ಆಯುರ್ವೇದ ಔಷಧಿಗಳನ್ನು ನೀಡಲಾಗಿತ್ತು, ಅದರಿಂದ ಉತ್ತಮ ಫಲಿತಾಂಶ ಕೂಡ ಬಂದಿತ್ತು.

ಸಾಮಾನ್ಯ ಕೊರೋನಾ ಔಷಧಿ ಜೊತೆಗೆ ಆಯುರ್ವೇದ ಔಷಧಿಯನ್ನು ನೀಡಿದೆವು,  ರೋಗಿಯು ಉತ್ತಮವಾಗಿ ಸ್ಪಂದಿಸಿದರು.ಆಕ್ಸಿಜನ್ ನೀಡಲಾಗುತ್ತಿತ್ತು, 9 ದಿನಗಳಲ್ಲಿ ಉತ್ತಮವಾಗಿ ಗುಣಮುಖರಾದರು ಎಂದ ಪ ಹೇಳಿದ್ದಾರೆ, 15 ಕೋವಿಡ್ ಮತ್ತು 15 ಕೋವಿಡ್ ಅಲ್ಲದ ರೋಗಿಗಳ ಮೇಲೆ ಪ್ರಯೋಗಗಳನ್ನು ನಡೆಸಲಾಗುವುದು.

ಆಯುರ್ವೇದ ಪ್ರಯೋಗಗಳನ್ನು ತೆಗೆದುಕೊಳ್ಳುವ ನಿರ್ಧಾರವು ವಾರಗಳ ಪರಿಶೀಲನೆ ಮತ್ತು ಸಂಶೋಧನೆಯ ನಂತರ ಕೈಗೊಳ್ಳಲಾಗಿದೆ, ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ಪ್ರತ್ಯೇಕ ಬ್ಲಾಕ್ ಸ್ಥಾಪಿಸಲಾಗಿದೆ, ಔಷಧವು ಕಾರ್ಯನಿರ್ವಹಿಸುತ್ತದೆಯೇ ಎಂದು ಪರೀಕ್ಷಿಸಲು ನಾವು ಕಂಪ್ಯೂಟರ್ ಸ್ಟಿಮ್ಯುಲೇಶನ್ ಮಾಡಿದ್ದೇವೆ, ಇದು ಉತ್ತಮ ಫಲಿತಾಂಶ ನೀಡಿದೆ
ಎಂದು ಆಯುರ್ವೇದ ತಜ್ಞ  ಡಾ.ಗಿರಿಧರ್ ಕಜೆ ಹೇಳಿದ್ದಾರೆ.

ನಾವು ಈಗಾಗಲೇ ಆಯುಷ್ ಇಲಾಖೆ ಅನುಮತಿ ಪಡೆದಿದ್ದೇವೆ, ಆದರೆ ಇಲಾಖೆಯ ಶಿಷ್ಟಾಚಾರದ ನೀತಿ ನಿಯಮಗಳಿಗಾಗಿ ಕಾಯುತ್ತಿರುವುದಾಗಿ ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT