ಹಿಪ್ಪೊಪೊಟಮಸ್ 
ರಾಜ್ಯ

ಕೊರೋನಾ ನಡುವೆ ಒಳ್ಳೇ ಸುದ್ದಿ!  ಬೆಂಗಳೂರು ಮೃಗಾಲಯದಲ್ಲಿ ಹಿಪ್ಪೊಪೊಟಮಸ್ ಮರಿ ಜನನ

ಬೆಂಗಳೂರು ಮೃಗಾಲಯದಲ್ಲಿ ಹಿಪ್ಪೊಪೊಟಮಸ್ಒಂದು ಮರಿಗೆ ಜನ್ಮನೀಡಿದ್ದು ಮೃಗಾಲಯದ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸಂತಸದ ವಿಚಾರವಾಗಿದೆ, ಕೊರೋನಾ ಬಿಕ್ಕಟ್ಟಿನ ನಡುವೆ ಪ್ರಾಣಿಗಳನ್ನು ನೋಡಿಕೊಳ್ಳುತ್ತಿರುವ ಇಲ್ಲಿನ ಸಿಬ್ಬಂದಿ ಈ ಮರಿಯು ಮುಂದೆ  ಮಕ್ಕಳು ಮತ್ತು ವಯಸ್ಕರಲ್ಲಿ ದೊಡ್ಡ ಆಕರ್ಷಣೆಯಾಗಲಿದೆ ಎಂದಿದ್ದಾರೆ. 

ಬೆಂಗಳೂರು: ಬೆಂಗಳೂರು ಮೃಗಾಲಯದಲ್ಲಿ ಹಿಪ್ಪೊಪೊಟಮಸ್ಒಂದು ಮರಿಗೆ ಜನ್ಮನೀಡಿದ್ದು ಮೃಗಾಲಯದ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸಂತಸದ ವಿಚಾರವಾಗಿದೆ, ಕೊರೋನಾ ಬಿಕ್ಕಟ್ಟಿನ ನಡುವೆ ಪ್ರಾಣಿಗಳನ್ನು ನೋಡಿಕೊಳ್ಳುತ್ತಿರುವ ಇಲ್ಲಿನ ಸಿಬ್ಬಂದಿ ಈ ಮರಿಯು ಮುಂದೆ  ಮಕ್ಕಳು ಮತ್ತು ವಯಸ್ಕರಲ್ಲಿ ದೊಡ್ಡ ಆಕರ್ಷಣೆಯಾಗಲಿದೆ ಎಂದಿದ್ದಾರೆ. 

11 ವರ್ಷದ ಹೆಣ್ಣು ಹಿಪ್ಪೊಪೊಟಮಸ್ ಮರಿಗೆ ಗೆ ಜನ್ಮ ನೀಡಿದ್ದು, ಮೃಗಾಲಯದಲ್ಲಿನ ಹಿಪ್ಪೊಸಂಖ್ಯೆಯನ್ನು ಎಂಟಕ್ಕೆ ಏರಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

"ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನ (ಬಿಬಿಬಿಪಿ) ಬನ್ನೇರುಘಟ್ಟ (ಬೆಂಗಳೂರು) ಮೃಗಾಲಯದಲ್ಲಿ ಹಿಪ್ಪೊ ಮರಿಯ  ಜನನವನ್ನು ಘೋಷಿಸಲು ಸಂತೋಷವಾಗಿದೆ" ಎಂದು ಬಿಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ವನಶ್ರೀ ವಿಪಿನ್ ಸಿಂಗ್ ಹೇಳಿದ್ದಾರೆ. ಮರಿಯು ದಶ್ಯ  ಎಂಬ ಹೆಸರಿನ ಹೆಣ್ಣು ಹೊಪೋಗೆ ಜನಿಸಿದೆ. ತಾಯಿ ಮತ್ತು ಚಿಕ್ಕ ಮರಿ ಎರಡೂ ಆರೋಗ್ಯವಾಗಿದೆ, ದಶ್ಯ 2018 ರ ಜನವರಿ 31 ರಂದು ತನ್ನ ಮೊದಲ ಮರಿಗೆ ಜನ್ಮನೀಡಿತ್ತು.

"ಈಗ ಹಿಪ್ಪೊಗಳ ಸಂಖ್ಯೆ ಹೆಚ್ಚಳವು ನಾವು ಇತರ ಪ್ರಾಣಿಸಂಗ್ರಹಾಲಯಗಳೊಂದಿಗೆ ಪ್ರಾಣಿ ವಿನಿಮಯ ಕಾರ್ಯಕ್ರಮಕ್ಕೆಮುಂದಾಗಲು ಅವಕಾಶ ಕಲ್ಪಿಸಿದೆ,"

ಜೈವಿಕ ಉದ್ಯಾನವನವು ನಾಲ್ಕು ಘಟಕಗಳನ್ನು ಹೊಂದಿದೆ - ಮೃಗಾಲಯ, ಸಫಾರಿ, ಚಿಟ್ಟೆ ಉದ್ಯಾನ ಮತ್ತು ರಿಸ್ಕ್ ಸೆಂಟರ್ 732 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನವನವು 2,279 ಪ್ರಾಣಿಗಳ ಆವಾಸವಾಗಿದೆ.  ಮೃಗಾಲಯವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದೊಳಗಿನ ಚಂಪಕಧಾಮ ಬೆಟ್ಟಗಳ ಸಾಲಿನಲ್ಲಿದೆ,

ಏತನ್ಮಧ್ಯೆ, ಆರೋಗ್ಯ ನಿರ್ಬಂಧಗಳನ್ನು ಸಡಿಲಿಸಿದ ನಂತರ ಚಾಮರಾಜನಗರ ಜಿಲ್ಲೆಯ ಬಂಡೀಪುರ ಟೈಗರ್ ರಿಸರ್ವ್ (ಬಿಟಿಆರ್) 20 ದಿನಗಳ ನಂತರ ಪ್ರವಾಸಿಗರಿಗೆ ಮತ್ತೆ ತೆರೆದಿದೆ, "ನಾವು ಸುಮಾರು 20 ದಿನಗಳ ನಂತರ ಮತ್ತೆ ಪ್ರವಾಸಿಗರನ್ನು ಸ್ವಾಗತಿಸಲು ಸಿದ್ದವಾಗಿದ್ದೇವೆ" ಎಂದು ಬಿಟಿಆರ್ ನಿರ್ದೇಶಕ ಟಿ. ಬಾಲಚಂದ್ರ ಐಎಎನ್‌ಎಸ್‌ಗೆ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT