ಕರ್ನಾಟಕಕ್ಕೆ ಆಗಮಿಸಿದ ಹುಲಿ 
ರಾಜ್ಯ

ಮಹಾರಾಷ್ಟ್ರದಿಂದ 300 ಕಿಮೀ ಕ್ರಮಿಸಿ ಕರ್ನಾಟಕದ ಹೊಸ ಮನೆಗೆ ಆಗಮಿಸಿದ ವ್ಯಾಘ್ರ!

ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಜನರಿಗೆ ಗಡಿ ದಾಟಲು ಅವಕಾಶವಿಲ್ಲ, ಆದರೆ ಇದೇ ನಿಯಮ ಪ್ರಾಣಿಗಳಿಗಿಲ್ಲ, ಹೀಗಾಗಿ ಹುಲಿಯೊಂದು 300 ಕಿಮೀ ಕ್ರಮಿಸಿ ಕರ್ನಾಟಕಕ್ಕೆ ಆಗಮಿಸಿದೆ.

ಹುಬ್ಬಳ್ಳಿ: ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಜನರಿಗೆ ಗಡಿ ದಾಟಲು ಅವಕಾಶವಿಲ್ಲ, ಆದರೆ ಇದೇ ನಿಯಮ ಪ್ರಾಣಿಗಳಿಗಿಲ್ಲ, ಹೀಗಾಗಿ ಹುಲಿಯೊಂದು 300 ಕಿಮೀ ಕ್ರಮಿಸಿ ಕರ್ನಾಟಕಕ್ಕೆ ಆಗಮಿಸಿದೆ.

ಮಹಾರಾಷ್ಟ್ರದ ಚಂಡೋಳಿ ರಾಷ್ಟ್ರೀಯ ಉದ್ಯಾನವನದ ಸಹ್ಯಾದ್ರಿ ಹುಲಿ ಸಂರಕ್ಷಣಾ ಧಾಮದಿಂದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಣಾ ಧಾಮಕ್ಕೆ ಬಂದಿದೆ.

ಹುಲಿ 2018 ರಲ್ಲಿ ಸಹ್ಯಾದ್ರಿ ಟೈಗರ್ ರಿಸರ್ವ್ ನಂದೂರ್‌ಬಾರ್‌ನಲ್ಲಿ ಮೊದಲ ಬಾರಿಗೆ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿತ್ತು. 2020 ರ ಮೇನಲ್ಲಿ ದಾಂಡೇಲಿಯ ಕಾಳಿ ಟೈಗರ್ ರಿಸರ್ವ್‌ನಲ್ಲಿ ಅದೇ ಹುಲಿ ಬಂದಿದೆ. 2020 ರ ಏಪ್ರಿಲ್ ಮತ್ತು ಮೇ ನಡುವೆ ಹುಲಿ (ಟಿ -31) ಹಲವು ಬಾರಿ ಕಾಣಿಸಿಕೊಂಡಿತ್ತು ಎಂದು ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ, ಹುಲಿ 150 ಚದರ ಕಿ.ಮೀ ಪ್ರದೇಶವನ್ನು ಚಲಿಸಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಎರಡು ವನ್ಯಜೀವಿ ಪ್ರದೇಶಗಳ ನಡುವಿನ ಅಂತರವು ಸುಮಾರು 225 ಕಿ.ಮೀ ಆದರೆ ಹುಲಿ ಛಿದ್ರಗೊಂಡ ಭೂದೃಶ್ಯದ ಮೂಲಕ ಚಲಿಸಲು ಹೆಚ್ಚು ಸಮಯ ತೆಗೆದುಕೊಂಡಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕರ್ನಾಟಕ-ಗೋವಾ-ದಕ್ಷಿಣ ಮಹಾರಾಷ್ಟ್ರದ ಸಂಪರ್ಕಿತ ಭೂದೃಶ್ಯದಲ್ಲಿ ಕಾಳಿ ಹುಲಿ ಮೀಸಲು ಹುಲಿಗಳಿಗೆ ಗಮನಾರ್ಹ ಆಕರ್ಷಣೆಯಾಗಿ ಹೊರಹೊಮ್ಮುತ್ತಿದೆ ಎಂದು  ಇಲಾಖೆ ಗಮನಿಸಿದೆ.

2020 ರಲ್ಲಿ ಕಾಳಿ ಟೈಗರ್ ರಿಸರ್ವ್‌ನಲ್ಲಿ ಸುಮಾರು 25 ವಯಸ್ಕ ಹುಲಿಗಳನ್ನು ಕ್ಯಾಮೆರಾ ಬಲೆಗಳಲ್ಲಿ ದಾಖಲಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಕಾಳಿಯ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ಪ್ರಯತ್ನಗಳು ಈಗ ಫಲಿತಾಂಶ ನೀಡುತ್ತಿದೆ. ಕಾಳಿ ಮೀಸಲು ಇಡೀ ಉತ್ತರ ಕರ್ನಾಟಕ-ಗೋವಾ-ದಕ್ಷಿಣ ಮಹಾರಾಷ್ಟ್ರ ಭೂದೃಶ್ಯಕ್ಕೆ ಹುಲಿಗಳ ಮೂಲವಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಾಳಿ ಹುಲಿ ಸಂರಕ್ಷಣಾ ಅರಣ್ಯ ವಿಭಾಗದ ನಿರ್ದೇಶಕ ಮರಿಯಾ ಕ್ರಿಸ್ಟಾ ರಾಜು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT