ರಾಜ್ಯ

ಹಾಸನ: 4 ದಿನದಲ್ಲಿ 20 ಸಾವು; ಅಧಿಕಾರಿಗಳಲ್ಲಿ ಹೆಚ್ಚಿದ ಆತಂಕ

Shilpa D

ಹಾಸನ: ಕೊರೋನಾ ವೈರಸ್ ನಿಂದಾಗಿ ಕಳೆದ ನಾಲ್ಕು ದಿನಗಳಲ್ಲಿ 20 ಮಂದಿ ಸಾವನ್ನಪ್ಪಿದ್ದು ಜಿಲ್ಲಾಡಳಿತಕ್ಕೆ ಆತಂಕ ಹೆಚ್ಚಾಗಿದೆ.

ಜಿಲ್ಲಾಧಿಕಾರಿ ಜಿ ಗಿರೀಶ್ ಹಿರಿಯ ವೈದ್ಯಾಧಿಕಾರಿಗಳ ತುರ್ತು ಸಭೆ ಕರೆದಿದ್ದು, ಸಾವಿನ ಪ್ರಮಾಣ ತಗ್ಗಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ಇನ್ನೂ ಕೊರೋನಾ ಆಸ್ಪತ್ರೆಗಳಲ್ಲಿ ದಾಖಲಾಗಿರುವ  ರೋಗಿಗಳ ಸ್ಥಿತಿಗತಿಗಳ ಬಗ್ಗೆ  ಪರಿಶೀಲನೆ ನಡೆಸಿದರು. 

ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ತಜ್ಞರು ಚಿಕಿತ್ಸೆಯ ಮಾರ್ಗವನ್ನು ಬದಲಾಯಿಸಲು ಸೂಚಿಸಿದರು, ಮತ್ತು ಇತ್ತೀಚಿನ ಸಾವುಗಳಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಡಿಸಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಅಗತ್ಯ ಔಷಧಿಗಳನ್ನು ಸಂಗ್ರಹಿಸುವಂತೆ ಜಿಲ್ಲಾ ಸರ್ಜನ್ ಗೆ ಮನವಿ ಮಾಡಿದ್ದಾರೆ. "ಜಿಲ್ಲಾ ಕಾರ್ಯಪಡೆ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು ಮತ್ತು ಪರಿಸ್ಥಿತಿಯನ್ನು ನಿರ್ವಹಿಸಬೇಕು ಎಂದು ಅವರು ಹೇಳಿದರು.
 

SCROLL FOR NEXT