ಬಿಎಂಟಿಸಿ 
ರಾಜ್ಯ

ವಾರದ ಪಾಸ್ ನಲ್ಲಿ ದಿನಾಂಕ ನಮೂದಿಸದೆ ಬಿಎಂಟಿಸಿ ಎಡವಟ್ಟು: ಪ್ರಯಾಣಿಕರು- ನಿರ್ವಾಹಕರ ನಡುವೆ ವಾಗ್ವಾದ!

ಕೊರೋನಾವೈರಸ್ ಲಾಕ್ ಡೌನ್ ಮಧ್ಯೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪರಿಚಯಿಸಿರುವ  ವಾರದ ಪಾಸ್ ನಲ್ಲಿ ದಿನಾಂಕ ನಮೂದಿಸದೆ ಮತ್ತೊಂದು ಎಡವಟ್ಟು ಮಾಡಲಾಗಿದ್ದು, ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ವಾಗ್ವಾದ, ಜಟಾಪಟಿಗೆ ಆಸ್ಪದ ಮಾಡಿಕೊಡಲಾಗಿದೆ.

ಬೆಂಗಳೂರು: ಕೊರೋನಾವೈರಸ್ ಲಾಕ್ ಡೌನ್ ಮಧ್ಯೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪರಿಚಯಿಸಿರುವ  ವಾರದ ಪಾಸ್ ನಲ್ಲಿ ದಿನಾಂಕ ನಮೂದಿಸದೆ ಮತ್ತೊಂದು ಎಡವಟ್ಟು ಮಾಡಲಾಗಿದ್ದು, ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ವಾಗ್ವಾದ, ಜಟಾಪಟಿಗೆ ಆಸ್ಪದ ಮಾಡಿಕೊಡಲಾಗಿದೆ.

ನೂತನ ವಾರದ ಪಾಸಿನಲ್ಲಿ ಸ್ಪಷ್ಟವಾದ ದಿನಾಂಕವನ್ನು ನಮೂದಿಸದೆ  ದಿನದ ಪಾಸುಗಳ ರೀತಿಯಲ್ಲಿ  ಪ್ರಯಾಣಿಕರಿಗೆ ವಿತರಿಸಲಾಗುತ್ತಿದೆ. ಇದು ಗೊಂದಲಕ್ಕೆ ಕಾರಣವಾಗಿದ್ದು, ನಿರ್ವಾಹಕರು ಅನಗತ್ಯ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂಬುದು ಪ್ರಯಾಣಿಕರ ಆರೋಪವಾಗಿದೆ.

300 ರೂಪಾಯಿಯ ನೂತನ ಪಾಸಿನಲ್ಲಿ 1 ರಿಂದ 31ನೇ ತಾರೀಖಿನವರೆಗೂ ದಿನಾಂಕವನ್ನು ಮುದ್ರಿಸಲಾಗಿದೆ. ಆದರೆ, ಯಾವುದೇ ರೀತಿಯ ದಿನಾಂಕವನ್ನು ನಮೂದಿಸುತ್ತಿಲ್ಲ, ಕೌಂಟರ್ ಗಳಲ್ಲಿ ಪಾಸುಗಳನ್ನು ವಿತರಿಸುವವರು ಕನಿಷ್ಠ ಪಕ್ಷ ಒಂದು ಸಂಕೇತವನ್ನು ಕೂಡಾ ಮುದ್ರಿಸುತ್ತಿಲ್ಲ. ಇವುಗಳನ್ನು ನಿರ್ವಾಹಕರಿಗೆ ತೋರಿಸಿದರೆ ದಿನಾಂಕ ಇಲ್ಲ ಎಂದು ಮಾನ್ಯ ಮಾಡುತ್ತಿಲ್ಲ. ಈ ಬಗ್ಗೆ ಕೌಂಟರ್ ನವರನ್ನು ಕೇಳಬೇಕಿತ್ತು ಎಂದು ವಿನಾಕಾರಣ ತೊಂದರೆಯುಂಟು ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ದೂರಿದ್ದಾರೆ. 

ಈ ಬಗ್ಗೆ ನಿರ್ವಾಹಕರನ್ನು ಪ್ರಶ್ನಿಸಿದರೆ, ವಾರದ ಪಾಸು ಪಡೆಯುವ ಪ್ರಯಾಣಿಕರೇ ಈ ಬಗ್ಗೆ ಕೌಂಟರ್ ಗಳಲ್ಲಿ ಬಗೆಹರಿಸಿಕೊಳ್ಳಬೇಕು, ಅದು ಅವರ ಜವಾಬಾಬ್ದಾರಿ, ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತಹ ರೀತಿಯಲ್ಲಿ ಮಾತನಾಡುತ್ತಿದ್ದಾರೆ.

ಒಟ್ಟಾರೇ, ಬಿಎಂಟಿಸಿಯ ಮತ್ತೊಂದು ಯಡವಟ್ಟಿನಿಂದ ಲಾಕ್ ಡೌನ್ ಕೆಲಸವಿಲ್ಲದೆ ಕಳೆದೆರಡು ತಿಂಗಳಿನಿಂದ ಕೆಲಸವಿಲ್ಲದೆ ಮನೆಯಲ್ಲಿಯೇ ಕುಳಿತಿದ್ದ ಪ್ರಯಾಣಿಕರು ಇದೀಗ ಆರಾಮಾಗಿ ಕೆಲಸಕ್ಕೂ ಹೋಗದಂತಾಗಿದೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT