ರಾಜ್ಯ

ಹಂಪಿಯಲ್ಲಿ ಭೂಕಂಪ ಸಂಭವಿಸಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

Srinivasamurthy VN

ಬೆಂಗಳೂರು: ಹಂಪಿಯಲ್ಲಿ ಇಂದು ಭೂಕಂಪ ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಸ್ಪಷ್ಟಪಡಿಸಿದ್ದಾರೆ.

ಐಸಿಹಾಸಿಕ ಪಾರಂಪರಿಕ ತಾಣ ಹಂಪಿಯಲ್ಲಿ ಇಂದು ಬೆಳಗ್ಗೆ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.0ರಷ್ಚು ತೀವ್ರತೆ ದಾಖಲಾಗಿದೆ ಎಂಬ ವರದಿಗಳ ಕುರಿತು ಸ್ಪಷ್ಟನೆ ನೀಡಿರುವ ಅವರು,  ಹಂಪಿಯಲ್ಲಿ ಇಂದು ಭೂಕಂಪ ಸಂಭವಿಸಿಲ್ಲ ಎಂದು  ಹೇಳಿದ್ದಾರೆ. 

ಇದಕ್ಕೂ ಮೊದಲು ಹಂಪಿಯ ಪೂರ್ವಭಾಗದಿಂದ 181 ಕಿ.ಮೀ ದೂರದಲ್ಲಿನ ಒಂದು ಪ್ರದೇಶದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿರುವುದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಅದರ ಪ್ರಭಾವ ಹಂಪಿಯಲ್ಲಿ ದಾಖಲಾಗಿದೆ ಅಷ್ಟೇ'' ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿತ್ತು. 
 

SCROLL FOR NEXT