ರಾಜ್ಯ

ಬೆಂಗಳೂರು: ಪಶ್ಚಿಮ ಬಂಗಾಳ ಮೂಲದ ಕಳ್ಳನ ಬಂಧನ, 1.16 ಗ್ರಾಂ ಚಿನ್ನಾಭರಣ ವಶ

Raghavendra Adiga

ಬೆಂಗಳೂರು: ಜ್ಯೂವೆಲರಿ ಶಾಪ್ ನಲ್ಲಿ ಕಳವು ಮಾಡಿದ್ದ ಆರೋಪಿಯನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿ, 1ಕೆಜಿ 16 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳ ಮೂಲದ 37 ವರ್ಷದ ಉತ್ತಮ್ ದೋಲಾಯಿ ಬಂಧಿತ ಆರೋಪಿ. ಬಂಧಿತನಿಂದ 45,06,500ರೂ ಮೌಲ್ಯದ 1 ಕೆಜಿ 16 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂ.6ರಂದು ಪೊಲೀಸ್ ಪೇದೆಗಳಾದ ಸುಭಾಷ್ , ಉಮೇಶ್ ಗಸ್ತಿನಲ್ಲಿರುವಾಗ ಕಂಠೀರವ ಸ್ಟೂಡಿಯೋ ಮುಖ್ಯ ರಸ್ತೆಯ ಬಳಿ ಓರ್ವ ವ್ಯಕ್ತಿ ಜ್ಯೂವೆಲ್ಲರಿ ಶಾಪ್ ಗಳ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದಾಗ ಆತನನ್ನು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡ. ಘಟನೆಗೆ ಸಂಬಂಧಿಸಿದಂತೆ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಕೆ ಎಸ್ ವೆಂಕಟೇಶ್ ನಾಯ್ಡು ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

SCROLL FOR NEXT