ರಾಜ್ಯ

ರಾಜ್ಯದ ವಿವಿಧೆಡೆ ಭ್ರಷ್ಟರಿಗೆ ಶಾಕ್! ಬೆಳ್ಳಂಬೆಳಗ್ಗೆ ಎಸಿಬಿ ದಾಳಿ, ಕಡತ ಪರಿಶೀಲನೆ

Raghavendra Adiga

ಕಲಬುರಗಿ: ಸೂರ್ಯ ನಗರಿ ಕಲಬುರಗಿಯಲ್ಲಿ ಹಾಗೂ ಕುಂದಾನಗರಿ ಬೆಳಗಾವಿಯಲ್ಲಿ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ ಮಾಡಿದೆ.

ಅದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಆರೋಪದಡಿ ದೇವರಾಜ್ ಅರಸು ಅಭಿವೃದ್ಧಿ ನಿಗಮದ ಕಲಬುರಗಿ ಮತ್ತು ಯಾದಗಿರಿ ವ್ಯವಸ್ಥಾಪಕ ಜಗದೇವಪ್ಪ ಮುಗುಟ ಮನೆ ಮೇಲೆ ದಾಳಿ ಎಸಿಬಿ ದಾಳಿ ಮಾಡಿದೆ.

ಜಗದೇವಪ್ಪ ಅವರ ಕಲಬುರಗಿಯ ಮನೆ , ಕಾಂಪ್ಲೆಕ್ಸ್ , ಯಾದಗಿರಿ ಕಚೇರಿ‌ ಸೇರಿ ಬೀದರ್ ಮನೆ ಮೇಲೆ ಏಕಕಾಲದಲ್ಲಿ ಕಲಬುರಗಿ ಮತ್ತು ಯಾದಗಿರಿ ಡಿವೈಎಸ್ಪಿ ಗಳ ನೇತೃತ್ವದ ತಂಡ ದಾಳಿ ಮಾಡಿದೆ.

ಕುಂದಾನಗರಿ ಬೆಳಗಾವಿಯಲ್ಲಿ ಎಸಿಬಿ ದಾಳಿ

ಬೆಳಗಾವಿ: ಕಲಬುರಗಿ ಮಾತ್ರವಲ್ಲದೆ ಬೆಳಗಾವಿಯ ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿ ಸುಭಾಷ್​ ಉಪ್ಪಾರ ಅವರ ಮನೆ ಹಾಗೂ ಕಚೇರಿ ಹಾಗೂ ಸಂಬಂಧಿಗಳ ಮೇಲೆ ಸಹ ಎಸಿಬಿ ಅಧಿಕಾರಿಗಳೂ ದಾಳಿ ನಡೆಸಿದ್ದಾರೆ, ನಗರದ ನಾಲ್ಕು ಬೇರೆ ಬೇರೆ ಕಡೆ ದಾಳಿ ನಡೆದಿದೆ. 

ಎಸಿಬಿ ಎಸ್‌ಪಿ ಬಿ.ಎಸ್.ನೇಮಗೌಡರ ನೇತೃತ್ವದ ತಂಡ ಬೆಳಗಾವಿಯ ರುಕ್ಮಿಣಿ ನಗರದ ಮನೆ, ಕಚೇರಿ, ಬಾಡಿಗೆ ಮನೆ ಹಾಗೂ ಬಸವನ ಕುಡಚಿಯಲ್ಲಿರುವ ಅಳಿಯ ಸದಾನಂದ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ.

SCROLL FOR NEXT