ರಾಜ್ಯ

ಸರ್ಕಾರದ ಸಂಸ್ಥೆಗಳಿಂದ ಬೆಂಗಳೂರು ನೀರು ಸರಬರಾಜು ಮಂಡಳಿಗೆ ಪಾವತಿಸಲು ಬಾಕಿ ಇರುವ ಹಣ 29 ಕೋಟಿ ರೂ!

ಸರ್ಕಾರದ ಸಂಸ್ಥೆಗಳಿಂದ ಸುಮಾರು 28.9 ಕೋಟಿ ರೂಪಾಯಿ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯುಎಸ್ ಎಸ್ ಬಿ)ಗೆ ಪಾವತಿಸಲು ಬಾಕಿಯಿದೆ. ಹಣ ಪಾವತಿಸದ ಪ್ರಮುಖ 100 ಸಂಸ್ಥೆಗಳಲ್ಲಿ ಬಿಬಿಎಂಪಿ ಮತ್ತು ಇಂದಿರಾ ಕ್ಯಾಂಟೀನ್ ಗಳು ಕೂಡ ಇವೆ.

ಬೆಂಗಳೂರು; ಸರ್ಕಾರದ ಸಂಸ್ಥೆಗಳಿಂದ ಸುಮಾರು 28.9 ಕೋಟಿ ರೂಪಾಯಿ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯುಎಸ್ ಎಸ್ ಬಿ)ಗೆ ಪಾವತಿಸಲು ಬಾಕಿಯಿದೆ. ಹಣ ಪಾವತಿಸದ ಪ್ರಮುಖ 100 ಸಂಸ್ಥೆಗಳಲ್ಲಿ ಬಿಬಿಎಂಪಿ ಮತ್ತು ಇಂದಿರಾ ಕ್ಯಾಂಟೀನ್ ಗಳು ಕೂಡ ಇವೆ.


ಒಟ್ಟು 28 ಕೋಟಿಯ 90 ಲಕ್ಷದ 03 ಸಾವಿರದ 259 ರೂಪಾಯಿ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿವೆ ಎಂಬ ಮಾಹಿತಿ ಪ್ರತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದೆ. ಹೆಬ್ಬಾಳದ ಬಿಬಿಎಂಪಿಯ ಸಹಾಯಕ ಎಂಜಿನಿಯರ್ ಕಚೇರಿಯಿಂದಲೇ 3.96 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ.


ನಗರದಲ್ಲಿರುವ 12 ಇಂದಿರಾ ಕ್ಯಾಂಟೀನ್ ಗಳು ಹಣ ಪಾವತಿಸಿಲ್ಲ. ಡಿಸಿಪಿ ಪೂರ್ವ ವಲಯದ ಸರ್ಕಾರಿ ಕ್ವಾರ್ಟರ್ಸ್, ರಿಜಿಸ್ಟ್ರಾರ್ ಜನರಲ್, ಕೆ ಜಿ ಹಳ್ಳಿ ಪೊಲೀಸ್ ಠಾಣೆ, ಪಿಡಬ್ಲ್ಯುಡಿ ಕ್ವಾರ್ಟರ್ಸ್, ಕೇಂದ್ರ ಸರ್ಕಾರಿ ಕಚೇರಿಗಳು, ಟೆಲಿಫೋನ್ ಕಚೇರಿಗಳು ಹಣ ಪಾವತಿಸದೆ ವಿಫಲವಾಗಿರುವ ಸಂಸ್ಥೆಗಳ ಪಟ್ಟಿಯಲ್ಲಿವೆ.


ಬಾಕಿ ಉಳಿಕೆಯನ್ನು ಸಂಗ್ರಹಿಸಲು ಬಿಡಬ್ಲ್ಯುಎಸ್ಎಸ್ ಬಿ ಪ್ರಯತ್ನಿಸುತ್ತಿದೆ. ವರ್ಷಗಳಿಂದ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ. ಅನಕ ಬಾರಿ ನೊಟೀಸ್ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಬಿಡಬ್ಲ್ಯುಎಸ್ಎಸ್ ಬಿ ಮುಖ್ಯ ಎಂಜಿನಿಯರ್ ಕೆಂಪರಾಮಯ್ಯ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT