ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಪೇದೆ ಮುಖಕ್ಕೆ ಉಗಿದು, ಡ್ರ್ಯಾಗರ್ ತೋರಿಸಿದ ರೌಡಿಗೆ ಧರ್ಮದೇಟು

ಸಂಚಾರಿ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಪೇದೆಯೊಬ್ಬರ ಮುಖಕ್ಕೆ ಉಗುಳಿ, ಮಾರಕಾಸ್ತ್ರ ತೋರಿಸಿ ಎಚ್ಚರಿಕೆ ನೀಡಿ ಪರಾರಿಯಾಗುತ್ತಿದ್ದ ರೌಡಿಯೊಬ್ಬನನ್ನು ಸಾರ್ವಜನಿಕರೇ ಹಿಡಿದು ಥಳಿಸಿರುವ ಘಟನೆ ನಡೆದಿದೆ.

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಪೇದೆಯೊಬ್ಬರ ಮುಖಕ್ಕೆ ಉಗುಳಿ, ಮಾರಕಾಸ್ತ್ರ ತೋರಿಸಿ ಎಚ್ಚರಿಕೆ ನೀಡಿ ಪರಾರಿಯಾಗುತ್ತಿದ್ದ ರೌಡಿಯೊಬ್ಬನನ್ನು ಸಾರ್ವಜನಿಕರೇ ಹಿಡಿದು ಥಳಿಸಿರುವ ಘಟನೆ ನಡೆದಿದೆ.

ಪುಲಿಕೇಶಿನಗರ ನಿವಾರಿ ಅರ್ಬಾಜ್ ಅಹ್ಮದ್ (33) ಆರೋಪಿಯಾಗಿದ್ದಾನೆ. ಮಾ.5ರಂದು ಪುಲಕೇಶಿನಗರ ಸಂಚಾರ ಠಾಣೆಯ ಸಿಬ್ಬಂದಿ ಮಂಜುನಾಥ್ ಮತ್ತು ಚೇತನ್ ಕ್ಲಾರೆನ್ಸ್ ಶಾಲೆ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು.  ಈ ವೇಳೆ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ಅರ್ಬಾಜ್ ನನ್ನು ಪೊಲೀಸರು ತಡೆದಿದ್ದರು.

ಬೈಕ್ ನ ನಂಬರ್ ಪ್ಲೇಟ್ ಕೂಡ ದೋಷಪೂರಿತವಾಗಿತ್ತು. ಪೊಲೀಸರು ತನ್ನನ್ನು ಹಿಡಿಯುತ್ತಾರೆಂದು ಭಾವಿಸಿದ ಅರ್ಬಾಜ್, ವ್ಹೀಲಿಂಗ್ ರೀತಿಯಲ್ಲಿ ಮಾಡಿಕೊಂಡೇ ಬೈಕ್ ತಿರುಗಿಸಿದ್ದ. ಅದನ್ನು ಗಮನಿಸಿದ ಪೇಡೆ ಹಿಡಿಯಲು ುಂದಾಗಿದ್ದರು. ಈ ವೇಳೆ ಆರೋಪಿ ಪೇದೆ ಮುಖಕ್ಕೆ ಉಗುಳಿಸ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಲ್ಲದೆ ಡ್ರ್ಯಾಗರ್ ತೋರಿಸಿ ಎಚ್ಚರಿಸಿ ಪರಾರಿಯಾಗಿದ್ದ. ಕೂಡಲೇ ಸಿಬ್ಬಂದಿ ಆರೋಪಿಯ ಬೈಕ್ ಬೆನ್ನಟ್ಟಿದ್ದರು. ಅದನ್ನು ಗಮನಿಸಿದ ಸಾರ್ವಜನಿಕರು ಸಿಬ್ಬಂದಿಯ ನೆರವಿಗೆ ಧಾವಿಸಿ ಆರೋಪಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT