ರಾಜ್ಯ

ಕುಖ್ಯಾತ ರೌಡಿ ಸ್ಲಮ್ ಭರತನ 12 ಸಹಚರರ ಬಂಧನ

Raghavendra Adiga

ಬೆಂಗಳೂರು: ರೌಡಿ ಶಿಟರ್ ಸ್ಲಮ್ ಭರತ್ ಪೋಲೀಸರಿಂದ ತಪ್ಪಿಸಿಕೊಳ್ಲಲು ಸಹಕರಿಸಿದ ದ ಇಬ್ಬರು ಮಹಿಳೆಯರು ಸೇರಿದಂತೆ 12 ಜನರನ್ನು ನಗರದ ಉತ್ತರ ವಿಭಾಗ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಜನರು ಹಲವಾರು ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ಬಂಧಿತ ಮಹಿಳೆಯರು ಅವರಿಗೆ ಆಶ್ರಯ ನೀಡಿದ್ದಾರೆ ಎಂದು ಪೋಲೀಸ್ ಅಧಿಕಾರಿಗಳು ಹೇಳಿದರು.

ಜನವರಿ 19 ರಂದು ರಾಜಗೋಪಾಲನಗರದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಹಾನಿಮಾಡಿದ ಪ್ರಕರಣದಲ್ಲಿ ಇವರು ಭಾಗಿಗಳಾಗಿದ್ದಾರೆ. ಎರಡು ದಿನಗಳ ನಂತರ, ಅದೇ ಗ್ಯಾಂಗ್ ಗಿರೀಶ್ ಎಂಬ ಉದ್ಯಮಿಗಯನ್ನು ರಾಬರಿ ಮಾಡಿದ್ದು ಕಾರನ್ನು ನಿಲ್ಲಿಸಿ ಪೀಣ್ಯದಲ್ಲಿ ಗನ್ ಪಾಯಿಂಟ್‌ನಲ್ಲಿ ಬೆದರಿಕೆ ಹಾಕಿದ್ದಲ್ಲದೆ ಆತನ ಕಾರಿನ ಸಮೇತ ಪರಾರಿಯಾಗಿತ್ತು.

ಅದೇ ರಾತ್ರಿ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲು ಯತ್ನಿಸಿದ ಪೊಲೀಸರ ಮೇಲೆ  ಗ್ಯಾಂಗ್ ಹಲ್ಲೆ ಮಾಡಿತ್ತು. ಆದರೆ ಇದೀಗ ಉತ್ತರ ವಿಭಾಗ ಪೊಲೀಸರು ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಗ್ಯಾಂಗ್ ನ ಎಲ್ಲಾ ಸದಸ್ಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

SCROLL FOR NEXT