ರಾಜ್ಯ

ದಾವಣಗೆರೆ: ಈ ಗ್ರಾಮದಲ್ಲಿ ರಸ್ತೆ ಬದಿಯೇ ಮೃತದೇಹಗಳ ಸಮಾಧಿ, ದಹನ!

ಮೃತದೇಹವನ್ನು ಸ್ಮಶಾನದಲ್ಲಿ ದಹಿಸಲು ಅಥವಾ ಸಮಾಧಿ ಮಾಡಲು ಅವಕಾಶ ಸಿಗದೆ ರಸ್ತೆಬದಿಯಲ್ಲಿ ಕೆಳಮಟ್ಟದ ಸಮುದಾಯದವರು ದಹನ ಮಾಡುವ ಪರಿಸ್ಥಿತಿ ದಾವಣಗೆರೆಯ ಪುಟ್ಟಗನಲ್ ಗ್ರಾಮದ ಕಡಜ್ಜಿ ಬಳಿ ನಡೆಯುತ್ತಿದೆ.

ದಾವಣಗೆರೆ:ಮೃತದೇಹವನ್ನು ಸ್ಮಶಾನದಲ್ಲಿ ದಹಿಸಲು ಅಥವಾ ಸಮಾಧಿ ಮಾಡಲು ಅವಕಾಶ ಸಿಗದೆ ರಸ್ತೆಬದಿಯಲ್ಲಿ ಕೆಳಮಟ್ಟದ ಸಮುದಾಯದವರು ದಹನ ಮಾಡುವ ಪರಿಸ್ಥಿತಿ ದಾವಣಗೆರೆಯ ಪುಟ್ಟಗನಲ್ ಗ್ರಾಮದ ಕಡಜ್ಜಿ ಬಳಿ ನಡೆಯುತ್ತಿದೆ.

ಮೇಲ್ವರ್ಗದ ಸಮುದಾಯದವರು ಮೃತದೇಹವನ್ನು ದಹನ ಮಾಡುತ್ತಿರುವ ಸ್ಥಳದಲ್ಲಿ ನಮಗೆ ಅವಕಾಶ ನೀಡುತ್ತಿಲ್ಲ ಎಂದು ಕೆಳ ಸಮುದಾಯದವರು ಆರೋಪಿಸುತ್ತಿದ್ದಾರೆ, ರಸ್ತೆ ಬದಿ ಮೃತದೇಹಗಳನ್ನು ದಹಿಸುತ್ತಿರುವುದರಿಂದ ಸಾರ್ವಜನಿಕರು ಇಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ.ಅಲ್ಲದೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ತಮಗೆ ಶವ ದಹನ ಮಾಡುವ ಸ್ಥಳ ನೀಡಬೇಕೆಂದು ಈ ಸಮುದಾಯದವರು ಸ್ಥಳೀಯಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.

ಈ ಬಗ್ಗೆ ಜಿಲ್ಲಾ ಪಂಚಾಯತ್ ಪದ್ಮ ಬಸವಂತಪ್ಪ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 91 ಗ್ರಾಮಗಳಲ್ಲಿ ಸಮಾಧಿಗಾಗಿ ಸಾರ್ವಜನಿಕ ಸ್ಮಶಾನಗಳಿಲ್ಲ. ಆದ್ದರಿಂದ, ನಾವು ಈ ಸ್ಥಳಗಳಲ್ಲಿ ಸ್ಮಶಾನಗಳನ್ನು ಸ್ಥಾಪಿಸಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಮಶಾನಗಳನ್ನು ಸ್ಥಾಪಿಸಲು ಪ್ರಾರಂಭಿಸುತ್ತೇವೆ ಎಂದರು.

ಸರ್ಕಾರಿ ಜಮೀನುಗಳು ಲಭ್ಯವಿಲ್ಲದ ಸ್ಥಳಗಳಲ್ಲಿ ಸ್ಮಶಾನಗಳನ್ನು ಸ್ಥಾಪಿಸಲು ಯಾರೂ ಭೂಮಿಯನ್ನು ಹಸ್ತಾಂತರಿಸಲು ಮುಂದೆ ಬಂದಿಲ್ಲ ಮತ್ತು ಈ ಸಮಸ್ಯೆಯನ್ನು ಜಿಲ್ಲಾಡಳಿತದೊಂದಿಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT