ರಾಜ್ಯ

ದಾವಣಗೆರೆ: ಈ ಗ್ರಾಮದಲ್ಲಿ ರಸ್ತೆ ಬದಿಯೇ ಮೃತದೇಹಗಳ ಸಮಾಧಿ, ದಹನ!

ಮೃತದೇಹವನ್ನು ಸ್ಮಶಾನದಲ್ಲಿ ದಹಿಸಲು ಅಥವಾ ಸಮಾಧಿ ಮಾಡಲು ಅವಕಾಶ ಸಿಗದೆ ರಸ್ತೆಬದಿಯಲ್ಲಿ ಕೆಳಮಟ್ಟದ ಸಮುದಾಯದವರು ದಹನ ಮಾಡುವ ಪರಿಸ್ಥಿತಿ ದಾವಣಗೆರೆಯ ಪುಟ್ಟಗನಲ್ ಗ್ರಾಮದ ಕಡಜ್ಜಿ ಬಳಿ ನಡೆಯುತ್ತಿದೆ.

ದಾವಣಗೆರೆ:ಮೃತದೇಹವನ್ನು ಸ್ಮಶಾನದಲ್ಲಿ ದಹಿಸಲು ಅಥವಾ ಸಮಾಧಿ ಮಾಡಲು ಅವಕಾಶ ಸಿಗದೆ ರಸ್ತೆಬದಿಯಲ್ಲಿ ಕೆಳಮಟ್ಟದ ಸಮುದಾಯದವರು ದಹನ ಮಾಡುವ ಪರಿಸ್ಥಿತಿ ದಾವಣಗೆರೆಯ ಪುಟ್ಟಗನಲ್ ಗ್ರಾಮದ ಕಡಜ್ಜಿ ಬಳಿ ನಡೆಯುತ್ತಿದೆ.

ಮೇಲ್ವರ್ಗದ ಸಮುದಾಯದವರು ಮೃತದೇಹವನ್ನು ದಹನ ಮಾಡುತ್ತಿರುವ ಸ್ಥಳದಲ್ಲಿ ನಮಗೆ ಅವಕಾಶ ನೀಡುತ್ತಿಲ್ಲ ಎಂದು ಕೆಳ ಸಮುದಾಯದವರು ಆರೋಪಿಸುತ್ತಿದ್ದಾರೆ, ರಸ್ತೆ ಬದಿ ಮೃತದೇಹಗಳನ್ನು ದಹಿಸುತ್ತಿರುವುದರಿಂದ ಸಾರ್ವಜನಿಕರು ಇಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ.ಅಲ್ಲದೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ತಮಗೆ ಶವ ದಹನ ಮಾಡುವ ಸ್ಥಳ ನೀಡಬೇಕೆಂದು ಈ ಸಮುದಾಯದವರು ಸ್ಥಳೀಯಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.

ಈ ಬಗ್ಗೆ ಜಿಲ್ಲಾ ಪಂಚಾಯತ್ ಪದ್ಮ ಬಸವಂತಪ್ಪ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 91 ಗ್ರಾಮಗಳಲ್ಲಿ ಸಮಾಧಿಗಾಗಿ ಸಾರ್ವಜನಿಕ ಸ್ಮಶಾನಗಳಿಲ್ಲ. ಆದ್ದರಿಂದ, ನಾವು ಈ ಸ್ಥಳಗಳಲ್ಲಿ ಸ್ಮಶಾನಗಳನ್ನು ಸ್ಥಾಪಿಸಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಮಶಾನಗಳನ್ನು ಸ್ಥಾಪಿಸಲು ಪ್ರಾರಂಭಿಸುತ್ತೇವೆ ಎಂದರು.

ಸರ್ಕಾರಿ ಜಮೀನುಗಳು ಲಭ್ಯವಿಲ್ಲದ ಸ್ಥಳಗಳಲ್ಲಿ ಸ್ಮಶಾನಗಳನ್ನು ಸ್ಥಾಪಿಸಲು ಯಾರೂ ಭೂಮಿಯನ್ನು ಹಸ್ತಾಂತರಿಸಲು ಮುಂದೆ ಬಂದಿಲ್ಲ ಮತ್ತು ಈ ಸಮಸ್ಯೆಯನ್ನು ಜಿಲ್ಲಾಡಳಿತದೊಂದಿಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಮೊಜ್ತಾಬಾ ಖಮೇನಿ ಜೀವಂತವಾಗಿ ಇದ್ದಾರೋ ಅಥವಾ ಇಲ್ಲವೋ? ಆತಂಕದ ಹಳೆಯ Video ಬಿಡುಗಡೆ ಮಾಡಿದ ಇರಾನ್!