ರಾಜ್ಯ

ದಾವಣಗೆರೆ: ಈ ಗ್ರಾಮದಲ್ಲಿ ರಸ್ತೆ ಬದಿಯೇ ಮೃತದೇಹಗಳ ಸಮಾಧಿ, ದಹನ!

ಮೃತದೇಹವನ್ನು ಸ್ಮಶಾನದಲ್ಲಿ ದಹಿಸಲು ಅಥವಾ ಸಮಾಧಿ ಮಾಡಲು ಅವಕಾಶ ಸಿಗದೆ ರಸ್ತೆಬದಿಯಲ್ಲಿ ಕೆಳಮಟ್ಟದ ಸಮುದಾಯದವರು ದಹನ ಮಾಡುವ ಪರಿಸ್ಥಿತಿ ದಾವಣಗೆರೆಯ ಪುಟ್ಟಗನಲ್ ಗ್ರಾಮದ ಕಡಜ್ಜಿ ಬಳಿ ನಡೆಯುತ್ತಿದೆ.

ದಾವಣಗೆರೆ:ಮೃತದೇಹವನ್ನು ಸ್ಮಶಾನದಲ್ಲಿ ದಹಿಸಲು ಅಥವಾ ಸಮಾಧಿ ಮಾಡಲು ಅವಕಾಶ ಸಿಗದೆ ರಸ್ತೆಬದಿಯಲ್ಲಿ ಕೆಳಮಟ್ಟದ ಸಮುದಾಯದವರು ದಹನ ಮಾಡುವ ಪರಿಸ್ಥಿತಿ ದಾವಣಗೆರೆಯ ಪುಟ್ಟಗನಲ್ ಗ್ರಾಮದ ಕಡಜ್ಜಿ ಬಳಿ ನಡೆಯುತ್ತಿದೆ.

ಮೇಲ್ವರ್ಗದ ಸಮುದಾಯದವರು ಮೃತದೇಹವನ್ನು ದಹನ ಮಾಡುತ್ತಿರುವ ಸ್ಥಳದಲ್ಲಿ ನಮಗೆ ಅವಕಾಶ ನೀಡುತ್ತಿಲ್ಲ ಎಂದು ಕೆಳ ಸಮುದಾಯದವರು ಆರೋಪಿಸುತ್ತಿದ್ದಾರೆ, ರಸ್ತೆ ಬದಿ ಮೃತದೇಹಗಳನ್ನು ದಹಿಸುತ್ತಿರುವುದರಿಂದ ಸಾರ್ವಜನಿಕರು ಇಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ.ಅಲ್ಲದೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ತಮಗೆ ಶವ ದಹನ ಮಾಡುವ ಸ್ಥಳ ನೀಡಬೇಕೆಂದು ಈ ಸಮುದಾಯದವರು ಸ್ಥಳೀಯಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.

ಈ ಬಗ್ಗೆ ಜಿಲ್ಲಾ ಪಂಚಾಯತ್ ಪದ್ಮ ಬಸವಂತಪ್ಪ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 91 ಗ್ರಾಮಗಳಲ್ಲಿ ಸಮಾಧಿಗಾಗಿ ಸಾರ್ವಜನಿಕ ಸ್ಮಶಾನಗಳಿಲ್ಲ. ಆದ್ದರಿಂದ, ನಾವು ಈ ಸ್ಥಳಗಳಲ್ಲಿ ಸ್ಮಶಾನಗಳನ್ನು ಸ್ಥಾಪಿಸಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಮಶಾನಗಳನ್ನು ಸ್ಥಾಪಿಸಲು ಪ್ರಾರಂಭಿಸುತ್ತೇವೆ ಎಂದರು.

ಸರ್ಕಾರಿ ಜಮೀನುಗಳು ಲಭ್ಯವಿಲ್ಲದ ಸ್ಥಳಗಳಲ್ಲಿ ಸ್ಮಶಾನಗಳನ್ನು ಸ್ಥಾಪಿಸಲು ಯಾರೂ ಭೂಮಿಯನ್ನು ಹಸ್ತಾಂತರಿಸಲು ಮುಂದೆ ಬಂದಿಲ್ಲ ಮತ್ತು ಈ ಸಮಸ್ಯೆಯನ್ನು ಜಿಲ್ಲಾಡಳಿತದೊಂದಿಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT