ರಾಜ್ಯ

ಹೊಸಪೇಟೆ: ಕಾಲುವೆಯಲ್ಲಿ ಬಕೆಟ್ ಹಿಡಿಯಲು ಹೋದ ವ್ಯಕ್ತಿ ನೀರುಪಾಲು!

Srinivasamurthy VN

ಹೊಸಪೇಟೆ: ಕಾಲುವೆಯಲ್ಲಿ ಜಾರಿ ಹೋಗುತಿದ್ದ ಬಕೆಟ್ ಹಿಡಿಯಲು ಹೋದ ವ್ಯಕ್ತಿ ನೀರು ಪಾಲಾಗಿರುವ ಘಟನೆ ಹೊಸಪೇಟೆಯಲ್ಲಿ ಭಾನುವಾರ ನಡೆದಿದೆ.

ಹೊಸಪೇಟೆ ನಗರದ ರೈಲ್ವೇ ಸ್ಟೇಷನ್ ಬಳಿಯ ಹೆಚ್.ಎಲ್.ಸಿ.ಕಾಲುವೆಯಲ್ಲಿ ಈ ಘಟನೆ ನಡೆದಿದ್ದು, ಹೆಂಡತಿಯ ಜೊತೆ ಬಟ್ಟೆ ತೊಳೆಯಲು ಕಾಲುವೆಗೆ ಹೋಗಿದ್ದ ಮೃತ ವ್ಯಕ್ತಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯನ್ನು 60ವರ್ಷದ ಶೇಖರಾಚಾರ್ಯ ಎಂದು ಗುರುತಿಸಲಾಗಿದೆ. ಹೊಸಪೇಟೆ ಗಚಿತ್ವಾಡ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT