ರಾಜ್ಯ

ಧಾರವಾಡ: ಆಸ್ತಿ ವಿವಾದ, ಅಣ್ಣನಿಂದಲೇ ತಮ್ಮನ ಕೊಲೆ!

Raghavendra Adiga

ಧಾರವಾಡ: ಅಣ್ಣನೇ ತಮ್ಮನನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಗರದ ಕಮಲಾಪುರ ಬಡಾವಣೆಯಲ್ಲಿ ನಡೆದಿದೆ.

29 ವರ್ಷದ ಉಮೇಶ್ ಬಾಳಗಿ ಕೊಲೆಯಾದ ವ್ಯಕ್ತಿ.

ಅಣ್ಣ ಚೆನ್ನಬಸಪ್ಪ ಬಾಳಗಿ ತಮ್ಮ ನನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದು, ಆಸ್ತಿ ವಿಚಾರಕ್ಕೆಪ್ರಾರಂಭವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. 

ಘಟನೆ ಸಂಬಂಧ ಧಾರವಡ ಉಪನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
 

SCROLL FOR NEXT