ಸಾಂದರ್ಭಿಕ ಚಿತ್ರ 
ರಾಜ್ಯ

ಪ್ರಯಾಣಿಕರ ಸುರಕ್ಷತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ಯಾಬ್ ಗಳಲ್ಲಿ ಫೈಬರ್ ಶೀಟ್ ಬಳಕೆ

ಕೊರೋನಾ ವೈರಸ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮವನ್ನು ಕ್ಯಾಬ್ ಚಾಲಕರು ಪಾಲಿಸಿದಂತಿದೆ. ಹಲವು ಕ್ಯಾಬ್ ಚಾಲಕರು ಚಾಲಕ ಮತ್ತು ಪ್ರಯಾಣಿಕರ ಸೀಟನ್ನು ಸರಿಯಾಗಿ ಕೇರಳ ರಾಜ್ಯದ ಮಾದರಿಯಲ್ಲಿ ಇಬ್ಭಾಗ ಮಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರು:ಕೊರೋನಾ ವೈರಸ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮವನ್ನು ಕ್ಯಾಬ್ ಚಾಲಕರು ಪಾಲಿಸಿದಂತಿದೆ. ಹಲವು ಕ್ಯಾಬ್ ಚಾಲಕರು ಚಾಲಕ ಮತ್ತು ಪ್ರಯಾಣಿಕರ ಸೀಟನ್ನು ಸರಿಯಾಗಿ ಕೇರಳ ರಾಜ್ಯದ ಮಾದರಿಯಲ್ಲಿ ಇಬ್ಭಾಗ ಮಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಜೆ ಸಿ ರೋಡ್ ಸರ್ವಿಸ್ ಸ್ಟೇಷನ್ ಗೆ ಹೋಗಿ ತಮ್ಮ ಕ್ಯಾಬ್ ಗೆ ಹಾರ್ಡ್ ಫೈಬರ್ ಶೀಟ್ ಹಾಕಿಸಿಕೊಂಡಿರುವ ಚಾಲಕ ಇರ್ಶಾದ್(ಹೆಸರು ಬದಲಿಸಲಾಗಿದೆ) ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಪ್ರಯಾಣಿಕರ ಮತ್ತು ನನ್ನ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಬೇರೆ ಕೆಲ ಚಾಲಕರು ಮಾಡಿಸಿರುವುದನ್ನು ನೋಡಿ ನಾನು ಮಾಡಿಸಿಕೊಂಡಿದ್ದೇನೆ. ಇದರಿಂದ ಪ್ರಯಾಣಿಕರಿಗೆ ನಮ್ಮ ಕಾರಿನಲ್ಲಿ ಪ್ರಯಾಣಿಸಬಹುದೆಂದು ಧೈರ್ಯ ಕೂಡ ಬರುತ್ತದೆ. ಚಾಲಕನ ಹತ್ತಿರದ ಸೀಟಿನಲ್ಲಿ ಕೂರಲು ಪ್ರಯಾಣಿಕರಿಗೆ ಬಿಡುವುದಿಲ್ಲ ಎಂದರು.

ಉಬರ್ ನಲ್ಲಿ ಪ್ರಯಾಣಿಕರ ಬಳಿ ಆನ್ ಲೈನ್ ನಲ್ಲಿ ಹಣ ಪಾವತಿ ಮಾಡಿ ಎಂದು ಕೇಳುತ್ತೇವೆ ಎಂದು ಕಾರ್ ಲುಕ್ ಸರ್ವಿಸ್ ಸ್ಟೇಷನ್ ಮಾಲಿಕ ನೌಶಾದ್ ಲತೀಫ್ ಹೇಳುತ್ತಾರೆ. ಹಳದಿ ಬೋರ್ಡ್ ಖಾಸಗಿ ಟ್ಯಾಕ್ಸಿಯಲ್ಲಿ ಫೈಬರ್ ಶೀಟ್ ಹಾಕಲು ಕಳೆದೊಂದು ವಾರದಿಂದ ಜನ ಒತ್ತಾಯಿಸುತ್ತಿದ್ದಾರೆ. ಈ ಶೀಟ್ ಗೆ 4ರಿಂದ 5 ಸಾವಿರ ರೂಪಾಯಿಗಳಾಗುತ್ತದೆ ಎಂದರು.

ಒಲಾ, ಉಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಶಾ, ಟ್ಯಾಕ್ಸಿಗಳಲ್ಲಿ ಫೈಬರ್ ಶೀಟ್ ಮತ್ತು ಸ್ವಯಂಚಾಲಿತ ಸ್ಪ್ರೇ ಸ್ಯಾನಿಟೈಸರ್ ಇಡಲು ಸರ್ಕಾರ ಆರ್ಥಿಕ ನೆರವು ನೀಡಬೇಕು. ಕ್ಯಾಬ್ ಮತ್ತು ಆಟೋರಿಕ್ಷಾ ಓಡಾಟಕ್ಕೆ ಅನುಮತಿ ನೀಡಿರುವ ರಾಜ್ಯಸರ್ಕಾರ ಯಾವುದೇ ಮಾರ್ಗಸೂಚಿ ಹೊರಡಿಸಿಲ್ಲ. ಸುರಕ್ಷಿತ ಕ್ರಮಗಳನ್ನು ಅನುಸರಿಸಿದರೆ ಮಾತ್ರ ಪ್ರಯಾಣಿಕರಿಗೆ ಸಹ ಕ್ಯಾಬ್ ಗಳಲ್ಲಿ ಪ್ರಯಾಣಿಸಲು ಧೈರ್ಯ ಬರುತ್ತದೆ. ಈ ಫೈಬರ್ ಶೀಟ್ ಗಳನ್ನು ಎಲ್ಲಾ ಚಾಲಕರಿಂದ ಅಳವಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಅದಕ್ಕೆ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

SCROLL FOR NEXT