ರಾಜ್ಯ

ಅನುಪಸ್ಥಿತಿ ತೋರಿಸಿಲು ಯೇಗೇಶ್ ಗೌಡ ಕೊಲೆಗೂ ಮುನ್ನ ವಿನಯ್ ಕುಲಕರ್ಣಿ ದೆಹಲಿಗೆ ಪ್ರಯಾಣಿಸಿದ್ದರು: ಸಿಬಿಐ

Lingaraj Badiger

ನವದೆಹಲಿ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಧಾರವಾಡದಲ್ಲಿ ತಮ್ಮ ಅನುಪಸ್ಥಿತಿಯನ್ನು ತೋರಿಸಲು 2016ರ ಜೂನ್ 15 ರಂದು ಧಾರವಾಡದಲ್ಲಿ ಬಿಜೆಪಿ ಮುಖಂಡ ಯೋಗೇಶ್ ಗೌಡ ಅವರ ಹತ್ಯೆ ಮಾಡುವ ಮೊದಲು ಮತ್ತು ನಂತರ ದೆಹಲಿಗೆ ಪ್ರಯಾಣಿಸಿದ್ದರು ಎಂದು ಸಿಬಿಐ ಆರೋಪಿಸಿದೆ.

ಕಾಂಗ್ರೆಸ್ ಮುಖಂಡ ಕುಲಕರ್ಣಿಯನ್ನು ಸಿಬಿಐ ಕಳೆದ ಗುರುವಾರ ಬಂಧಿಸಿದ್ದು, ಎರಡು ದಿನಗಳ ವಿಚಾರಣೆ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ವಿನಯ್ ಕುಲಕರ್ಣಿ ಅವರು ಜೂನ್ 12, 2016ರಂದು ಬೆಳಗ್ಗೆ 11.30ಕ್ಕೆ ದೆಹಲಿಗೆ ತೆರಳಿದ್ದರು ಮತ್ತು ಮರುದಿನ 10.40ಕ್ಕೆ ಮರಳಿದ್ದಾರೆ. ಅಲ್ಲದೆ ಕೊಲೆ ನಡೆದ ಒಂದು ದಿನದ ನಂತರ ಅವರು ಮತ್ತೆ ಜೂನ್ 16, 2016ರಂದು ಸಂಜೆ ದೆಹಲಿಗೆ ತೆರಳಿದ್ದರು ಮತ್ತು ಜೂನ್ 18, 2016 ರಂದು ಮರಳಿದ್ದಾರೆ ಎಂದು ಸಿಬಿಐ ತಿಳಿಸಿದೆ.

"ಪ್ರಯಾಣದ ದಿನವೇ ವಿಮಾನದ ಟಿಕೆಟ್ ಗಳನ್ನು ಕಾಯ್ದಿರಿಸಲಾಗಿದೆ ಮತ್ತು ಪ್ರಯಾಣದ ಉದ್ದೇಶವು ಬೇರೆಡೆ ಇರುವುದನ್ನು ತೋರಿಸುವುದಾಗಿದೆ" ಎಂದು ಸಿಬಿಐ ಆರೋಪಿಸಿದೆ.

SCROLL FOR NEXT