ಎನ್ ಐಎ ತಂಡ 
ರಾಜ್ಯ

ಭಯೋತ್ಪಾದಕರೊಂದಿಗೆ ನಂಟು: ಆಗಸ್ಟ್ ನಿಂದೀಚೆಗೆ ಎನ್ ಐ ಎ ಯಿಂದ ಕರ್ನಾಟಕದಲ್ಲಿ 7 ಮಂದಿ ಬಂಧನ

ಭಯೋತ್ಪಾದನೆ ಪ್ರಕರಣಗಳ ಸಂಬಂಧ ಆಗಸ್ಟ್ ನಿಂದ ಇಲ್ಲಿಯವರೆಗೆ ರಾಷ್ಟ್ರೀಯ ತನಿಖಾ ತಂಡ 7 ಮಂದಿಯನ್ನು ಬಂಧಿಸಿದೆ. 

ಬೆಂಗಳೂರು: ಭಯೋತ್ಪಾದನೆ ಪ್ರಕರಣಗಳ ಸಂಬಂಧ ಆಗಸ್ಟ್ ನಿಂದ ಇಲ್ಲಿಯವರೆಗೆ ರಾಷ್ಟ್ರೀಯ ತನಿಖಾ ತಂಡ 7 ಮಂದಿಯನ್ನು ಬಂಧಿಸಿದೆ. 7 ಮಂದಿಯಲ್ಲಿ ಐವರು ಕರ್ನಾಟಕದವರಾಗಿದ್ದು, ಒಬ್ಬ ತಮಿಳುನಾಡಿನವರಾಗಿದ್ದಾನೆ.

ಒಬ್ಬ ಬೆಂಗಳೂರಿನವನು ಮತ್ತೊಬ್ಬ ಉತ್ತರ ಕನ್ನಡವನಾಗಿದ್ದರೇ ಇಬ್ಬರು ವೈದ್ಯರಾದ ಡಾ.ಸಬೀಲ್ ಅಹ್ಮದ್ ಮತ್ತು ಡಾ. ಅಬ್ದುಲ್ ರೆಹಮಾನ್ ಹಾಗೂ  ಮೂರನೇಯವನು  ಅಬ್ದುಲ್ ಅಹಮದ್ ಖಾದರ್ ತಮಿಳುನಾಡಿನ ರಾಮನಾಥಪುರಂ ನವನಾಗಿದ್ದಾನೆ.

ಬೆಂಗಳೂರು ನಗರದಲ್ಲಿ 2012 ರ ಲಷ್ಕರ್-ಎ-ತೈಬಾ (ಎಲ್‌ಇಟಿ) ಉಗ್ರರ ನೇಮಕಾತಿ ಪ್ರಕರಣದಲ್ಲಿ ಆಗಸ್ಟ್ 30 ರಂದು ಸೌದಿ ಅರೇಬಿಯಾದಿಂದ ಗಡೀಪಾರು ಮಾಡಿದ ನಂತರ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಬೀಲ್‌ನನ್ನು ಬಂಧಿಸಲಾಯಿತು.

ನೇತ್ರಶಾಸ್ತ್ರಜ್ಞ ರೆಹಮಾನ್ ನನ್ನು ಆಗಸ್ಟ್ 17 ರಂದು ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯದಲ್ಲಿ ಬಂಧಿಸಲಾಯಿತು. ಅಹ್ಮದ್ ಮತ್ತು ರೆಹಮಾನ್ ಇಬ್ಬರೂ ವೈದ್ಯರ ಕುಟುಂಬಗಳಿಗೆ ಸೇರಿದವರು. ಕಫೀಲ್ ಅಹ್ಮದ್ ಜೂನ್ 29, 2007 ರಂದು ಗ್ಲ್ಯಾಸ್ಗೋ ವಿಮಾನ ನಿಲ್ದಾಣದಲ್ಲಿ ದಾಳಿ ನಡೆಸಿದ್ದ. ನಂತರ ಸುಟ್ಟ ಗಾಯಗಳಿಂದ ಆತ ಸಾವನ್ನಪ್ಪಿದ್ದ.

ಸೆಪ್ಟೆಂಬರ್‌ನಲ್ಲಿ, ಡಿಜೆ ಹಳ್ಳಿ ಹಿಂಸಾಚಾರ ಪ್ರಕರಣದಲ್ಲಿ ಬ್ಯಾಂಕ್ ರಿಕವರಿ ಏಜೆಂಟ್ ಸೈಯದ್ ಸಾದಿಕ್ ಅಲಿಯನ್ನು ಎನ್ ಐ ಎ ಬಂಧಿಸಿತ್ತು ಮತ್ತು ಅಕ್ಟೋಬರ್‌ನಲ್ಲಿ ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಆಟೋ ಚಾಲಕ ಸೈಯದ್ ಸೇತುನನ್ನು ಬಂಧಿಸಿತ್ತು.

ಮಂಗಳವಾರ, ಎನ್ಐಎ ಕಾನೂನುಬಾಹಿರ ಲಷ್ಕರ್-ಎ-ತೈಬಾ ನೇಮಕಾತಿ ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಯ 28 ವರ್ಷದ ಸಯ್ಯದ್ ಎಂ ಇಡ್ರಿಸ್ ಎಂಬಾತನನ್ನು ಬಂಧಿಸಿದೆ.  ಅದೇ ತಿಂಗಳಲ್ಲಿ ಇರ್ಫಾನ್ ನಾಸಿರ್ ಮತ್ತು ಕಾದರ್ ನನ್ನು ಐಎಸ್ ಮತ್ತು ಎಸಿಸ್ ಸಂಘಟನೆಗೆ ಸಂಬಂಧಿಸಿದ ಬೆಂಗಳೂರು ಮೂಲದ ಇಬ್ಬರನ್ನು ಬಂಧಿಸಿತ್ತು.

ಜುಲೈನಲ್ಲಿ ರಾಷ್ಟ್ರೀಯ ತನಿಖಾ ತಂಡ ಐಸಿಸ್ ಸಂಪರ್ಕ ಹೊಂದಿದ್ದ 17 ಮಂದಿ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿತ್ತು. ಬೆಂಗಳೂರಿನ ಮೆಹಬೂಬ್ ಪಾಶಾ, ಕೋಲಾರದ ಇಬ್ಬರು ಮತ್ತು ಉಳಿದವರು ತಮಿಳುನಾಡಿನವರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT