ರಾಜ್ಯ

ಕೆಜಿ ಹಳ್ಳಿ ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ಲುಕ್ ಔಟ್ ನೋಟಿಸ್

Shilpa D

ಬೆಂಗಳೂರು: ಕೆ.ಜಿ. ಹಳ್ಳಿ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್‌ ಸಂಪತ್ ರಾಜ್ ವಿರುದ್ದ ಲುಕ್ ಔಟ್ ನೋಟಿಸ್‌ ಹೊರಡಿಸಲಾಗಿದೆ. ಅವರನ್ನು ಪತ್ತೆ ಹಚ್ಚಲು ಪೊಲೀಸರ ನಾಲ್ಕೈದು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ನಡುವೆ ಮೈಸೂರು, ನಾಗರಹೊಳೆ, ತಮಿಳುನಾಡು, ಕೇರಳ ಸೇರಿ ಮುಂಬೈನಲ್ಲೂ ಸಿಸಿಬಿ ಹುಡುಕಾಡುತ್ತಿದೆ‌. ಆದರೆ ಪೊಲೀಸರಿಗೆ ಇನ್ನೂ ಸಂಪತ್ ರಾಜ್ ಎಲ್ಲಿದ್ದಾರೆ ಅನ್ನೋ ಮಾಹಿತಿ ಸಿಕ್ಕಿಲ್ಲ. ಸಂಪತ್ ರಾಜ್ ಜವಾಬ್ದಾರಿಯುತ ನಾಗರಿಕನಾಗಿ ಬಂದು ಶರಣಾಗಬೇಕೆಂದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಅವರಿಂದ ಸಾಕಷ್ಟು ಜನರಿಗೆ ತೊಂದರೆ ಉಂಟಾಗಿದೆ. ಸಾರ್ವಜನಿಕರ ಆಸ್ತಿಪಾಸ್ತಿ ಹಾಳಾಗಿದೆ. ಸಂಪತ್ ರಾಜ್ ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ. ಅವರ ವಿರುದ್ದ ಲುಕ್ ಔಟ್ ನೊಟೀಸ್ ಹೊರಡಿಸಲಾಗಿದೆ ಇನ್ನು ಟೆಕ್ನಿಕಲ್ ಜಾಣ ನಡೆ ಇಟ್ಟಿರುವ ಸಂಪತ್ ರಾಜ್ ಫೋನ್ ಬಳಸದೆ, ಯಾರನ್ನೂ ಸಂಪರ್ಕಿಸದೆ ಅಜ್ಞಾತವಾಗಿದ್ದುಕೊಂಡು ಪೊಲೀಸರಿಗೆ
ಚಳ್ಳೆಹಣ್ಷು ತಿನ್ನಿಸುತ್ತಿದ್ದಾರೆ.

SCROLL FOR NEXT