ರಾಜ್ಯ

ದೀಪಾವಳಿ ಪಟಾಕಿ: ಬೆಂಗಳೂರಿನಲ್ಲಿ ಮಾಲಿನ್ಯ ಶೇ.46.7ರಷ್ಟು ಕಡಿಮೆ

ಈ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಏಳು ಸ್ಥಳಗಳಲ್ಲಿ ವಾಯುಮಾಲಿನ್ಯದ ಗುಣಮಟ್ಟದ ಮೌಲ್ಯಮಾಪನ ನಡೆಸಲಾಗಿದ್ದು ಪಟಾಕಿ ಸಿಡಿಸುವುದರಿಂದ ಉಂಟಾಗುವ ವಾಯುಮಾಲಿನ್ಯದಲ್ಲಿ ಸರಾಸರಿ 46.7 ರಷ್ಟು ಕಡಿತವನ್ನು ದಾಖಲಿಸಿದೆ.

ಬೆಂಗಳೂರು: ಈ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಏಳು ಸ್ಥಳಗಳಲ್ಲಿ ವಾಯುಮಾಲಿನ್ಯದ ಗುಣಮಟ್ಟದ ಮೌಲ್ಯಮಾಪನ ನಡೆಸಲಾಗಿದ್ದು ಪಟಾಕಿ ಸಿಡಿಸುವುದರಿಂದ ಉಂಟಾಗುವ ವಾಯುಮಾಲಿನ್ಯದಲ್ಲಿ ಸರಾಸರಿ 46.7 ರಷ್ಟು ಕಡಿತವನ್ನು ದಾಖಲಿಸಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಡೆಸಿದ ಈ ಸಮೀಕ್ಷೆಯಲ್ಲಿ ಈ ಬಾರಿ ನಗರದಲ್ಲಿ ಪಟಾಕಿಗಳಿಂಡಾಗುವ ವಾಯುಮಾಲಿನ್ಯ ಪ್ರಮಾಣ ಇಳಿಕೆಯಾಗಿರುವುದು ಸಾಬೀತಾಗಿದೆ.

ಇದೇ ಅಲ್ಲದೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ, ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಶೇಕಡಾ 30.34 ರಷ್ಟು ಇಳಿಕೆ ಕಂಡುಬಂದಿದೆ. ಕೆಎಸ್‌ಪಿಸಿಬಿ ಮಾಹಿತಿಯ ಪ್ರಕಾರ, ನವೆಂಬರ್ 9 ಅನ್ನು (ವರ್ಷದ ಸಾಮಾನ್ಯ ದಿನ) ಪರಿಗಣಿಸುವಾಗ, ಏಳು ಸ್ಥಳಗಳ ಪೈಕಿ ನಾಲ್ಕರಲ್ಲಿ ಪರಿಸ್ಥಿತಿ ಮದ್ಯಮ ಪ್ರಮಾಣದಲ್ಲಿತ್ತು. ಪಶುವೈದ್ಯಕೀಯ ಆಸ್ಪತ್ರೆ, ಹೆಬ್ಬಾಳ, ; ಜಯನಗರ 5 ನೇ ಬ್ಲಾಕ್; ಕವಿಕಾ, ಮೈಸೂರು ರಸ್ತೆ; ಮತ್ತು ನಿಮ್ಹಾನ್ಸ್, ಸಿಟಿ ರೈಲ್ವೆ ನಿಲ್ದಾಣ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಗಳಲ್ಲಿ ಮಾಲಿನ್ಯ ಪ್ರಮಾಣ ತೃಪ್ತಿಕರವಾಗಿದೆ

ಬಸವೇಶ್ವರ ನಗರದ ಎಸ್‌ಜಿ ಹಳ್ಳಿ, ಯಲ್ಲಿ ಅದು ‘ಉತ್ತಮ’ವಾಗಿತ್ತು. ದೀಪಾವಳಿ ಸಮಯದಲ್ಲಿ (ನವೆಂಬರ್ 14-16), ಸಿಟಿ ರೈಲ್ವೆ ನಿಲ್ದಾಣದಲ್ಲಿ ಎಕ್ಯೂಐ ಮೌಲ್ಯ 77, ಪಶುವೈದ್ಯಕೀಯ ಕಾಲೇಜು, ಹೆಬ್ಬಾಳ (64)ಕವಿಕಾ, ಮೈಸೂರು ರಸ್ತೆ (62), ಮತ್ತು ನಿಮ್ಹಾನ್ಸ್ (61). ದಾಖ್ಲಾಗಿದೆ.

ಎಕ್ಯೂಐ 51-100ರ ಒಳಗಿದ್ದರೆ ತೃಪ್ತಿಕರ ಎಂದು ಪರಿಗಣಿಸಲಾಗುತ್ತದೆ. ಅದರಂತೆ ಎಸ್‌ಜಿ ಹಳ್ಳಿ(39), ಜಯನಗರ 5 ನೇ ಬ್ಲಾಕ್ (44), ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ (43) ನಲ್ಲಿ ಅದು ‘ಉತ್ತಮ ಎನಿಸಿದೆ.  ಏಕೆಂದರೆ ಅವು 0-50ರ ವರ್ಗಕ್ಕೆ ಬಂದಿದ್ದವು, ಕೆಎಸ್‌ಪಿಸಿಬಿ ನಗರದಲ್ಲಿ ನಿರಂತರವಾಗಿ 10 ರೌಂಡಪ್ ಶಬ್ದ ಮಾಲಿನ್ಯ ಅಂದಾಜಿಸುವ ಕೇಂದ್ರಗಳನ್ನು ಸ್ಥಾಪಿಸಿತ್ತು ಮತ್ತು ಈ ಅವಧಿಯಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ಮೇಲ್ವಿಚಾರಣೆ ನಡೆಸಿತು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT