ರಾಜ್ಯ

ದೀಪಾವಳಿ ಪಟಾಕಿ: ಬೆಂಗಳೂರಿನಲ್ಲಿ ಮಾಲಿನ್ಯ ಶೇ.46.7ರಷ್ಟು ಕಡಿಮೆ

ಈ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಏಳು ಸ್ಥಳಗಳಲ್ಲಿ ವಾಯುಮಾಲಿನ್ಯದ ಗುಣಮಟ್ಟದ ಮೌಲ್ಯಮಾಪನ ನಡೆಸಲಾಗಿದ್ದು ಪಟಾಕಿ ಸಿಡಿಸುವುದರಿಂದ ಉಂಟಾಗುವ ವಾಯುಮಾಲಿನ್ಯದಲ್ಲಿ ಸರಾಸರಿ 46.7 ರಷ್ಟು ಕಡಿತವನ್ನು ದಾಖಲಿಸಿದೆ.

ಬೆಂಗಳೂರು: ಈ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಏಳು ಸ್ಥಳಗಳಲ್ಲಿ ವಾಯುಮಾಲಿನ್ಯದ ಗುಣಮಟ್ಟದ ಮೌಲ್ಯಮಾಪನ ನಡೆಸಲಾಗಿದ್ದು ಪಟಾಕಿ ಸಿಡಿಸುವುದರಿಂದ ಉಂಟಾಗುವ ವಾಯುಮಾಲಿನ್ಯದಲ್ಲಿ ಸರಾಸರಿ 46.7 ರಷ್ಟು ಕಡಿತವನ್ನು ದಾಖಲಿಸಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಡೆಸಿದ ಈ ಸಮೀಕ್ಷೆಯಲ್ಲಿ ಈ ಬಾರಿ ನಗರದಲ್ಲಿ ಪಟಾಕಿಗಳಿಂಡಾಗುವ ವಾಯುಮಾಲಿನ್ಯ ಪ್ರಮಾಣ ಇಳಿಕೆಯಾಗಿರುವುದು ಸಾಬೀತಾಗಿದೆ.

ಇದೇ ಅಲ್ಲದೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ, ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಶೇಕಡಾ 30.34 ರಷ್ಟು ಇಳಿಕೆ ಕಂಡುಬಂದಿದೆ. ಕೆಎಸ್‌ಪಿಸಿಬಿ ಮಾಹಿತಿಯ ಪ್ರಕಾರ, ನವೆಂಬರ್ 9 ಅನ್ನು (ವರ್ಷದ ಸಾಮಾನ್ಯ ದಿನ) ಪರಿಗಣಿಸುವಾಗ, ಏಳು ಸ್ಥಳಗಳ ಪೈಕಿ ನಾಲ್ಕರಲ್ಲಿ ಪರಿಸ್ಥಿತಿ ಮದ್ಯಮ ಪ್ರಮಾಣದಲ್ಲಿತ್ತು. ಪಶುವೈದ್ಯಕೀಯ ಆಸ್ಪತ್ರೆ, ಹೆಬ್ಬಾಳ, ; ಜಯನಗರ 5 ನೇ ಬ್ಲಾಕ್; ಕವಿಕಾ, ಮೈಸೂರು ರಸ್ತೆ; ಮತ್ತು ನಿಮ್ಹಾನ್ಸ್, ಸಿಟಿ ರೈಲ್ವೆ ನಿಲ್ದಾಣ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಗಳಲ್ಲಿ ಮಾಲಿನ್ಯ ಪ್ರಮಾಣ ತೃಪ್ತಿಕರವಾಗಿದೆ

ಬಸವೇಶ್ವರ ನಗರದ ಎಸ್‌ಜಿ ಹಳ್ಳಿ, ಯಲ್ಲಿ ಅದು ‘ಉತ್ತಮ’ವಾಗಿತ್ತು. ದೀಪಾವಳಿ ಸಮಯದಲ್ಲಿ (ನವೆಂಬರ್ 14-16), ಸಿಟಿ ರೈಲ್ವೆ ನಿಲ್ದಾಣದಲ್ಲಿ ಎಕ್ಯೂಐ ಮೌಲ್ಯ 77, ಪಶುವೈದ್ಯಕೀಯ ಕಾಲೇಜು, ಹೆಬ್ಬಾಳ (64)ಕವಿಕಾ, ಮೈಸೂರು ರಸ್ತೆ (62), ಮತ್ತು ನಿಮ್ಹಾನ್ಸ್ (61). ದಾಖ್ಲಾಗಿದೆ.

ಎಕ್ಯೂಐ 51-100ರ ಒಳಗಿದ್ದರೆ ತೃಪ್ತಿಕರ ಎಂದು ಪರಿಗಣಿಸಲಾಗುತ್ತದೆ. ಅದರಂತೆ ಎಸ್‌ಜಿ ಹಳ್ಳಿ(39), ಜಯನಗರ 5 ನೇ ಬ್ಲಾಕ್ (44), ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ (43) ನಲ್ಲಿ ಅದು ‘ಉತ್ತಮ ಎನಿಸಿದೆ.  ಏಕೆಂದರೆ ಅವು 0-50ರ ವರ್ಗಕ್ಕೆ ಬಂದಿದ್ದವು, ಕೆಎಸ್‌ಪಿಸಿಬಿ ನಗರದಲ್ಲಿ ನಿರಂತರವಾಗಿ 10 ರೌಂಡಪ್ ಶಬ್ದ ಮಾಲಿನ್ಯ ಅಂದಾಜಿಸುವ ಕೇಂದ್ರಗಳನ್ನು ಸ್ಥಾಪಿಸಿತ್ತು ಮತ್ತು ಈ ಅವಧಿಯಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ಮೇಲ್ವಿಚಾರಣೆ ನಡೆಸಿತು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Unnao Rape Case: ಕುಲದೀಪ್ ಸಿಂಗ್ ಸೆಂಗಾರ್'ಗೆ ತೀವ್ರ ಹಿನ್ನಡೆ, ಜೀವಾವಧಿ ಶಿಕ್ಷೆ ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಡೆಹ್ರಾಡೂನ್‌ನಲ್ಲಿ ತ್ರಿಪುರಾ ವಿದ್ಯಾರ್ಥಿಯ ಹತ್ಯೆ: 'ಭಯಾನಕ ದ್ವೇಷ' ದ ಅಪರಾಧ, BJP ವಿರುದ್ಧ ರಾಹುಲ್ ಗಾಂಧಿ ಕಿಡಿ!

Horrific Video: Mahindra Bolero ವಾಹನದ ಮೇಲೆ ಬಿದ್ದ ಟ್ರಕ್, ಕಾರು ಅಪ್ಪಚ್ಚಿ, ಚಾಲಕ ಸಾವು!

ಅರಾವಳಿ ಬೆಟ್ಟಗಳು, ಶ್ರೇಣಿಗಳ ಕುರಿತ ವ್ಯಾಖ್ಯಾನ: ನ. 20 ರ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ!

ದೆಹಲಿ ವಾಯು ಗುಣಮಟ್ಟ ಅತ್ಯಂತ 'ಗಂಭೀರ'; ದಟ್ಟವಾದ ಮಂಜು; 128 ವಿಮಾನಗಳು ರದ್ದು

SCROLL FOR NEXT