ಸಂಗ್ರಹ ಚಿತ್ರ 
ರಾಜ್ಯ

ಕೋವಿಡ್ ಎಫೆಕ್ಟ್: ಈ ಬಾರಿ ಆನ್'ಲೈನ್'ನಲ್ಲಿ ನಡೆಯಲಿದೆ ಚಿತ್ರ ಸಂತೆ

ಕಲಾಪ್ರೇಮಿಗಳ ಬಹುನಿರೀಕ್ಷಿಯ ಬಣ್ಣಗಳ ಚಿತ್ತಾರದ ಕಲರವ ಮೂಡಿಸುವ ಚಿತ್ರಸಂತೆಗೆ ವರ್ಚುವಲ್ ಎಫೆಕ್ಟ್ ನೀಡಲಾಗುತ್ತಿದೆ. 

ಬೆಂಗಳೂರು: ಕಲಾಪ್ರೇಮಿಗಳ ಬಹುನಿರೀಕ್ಷಿಯ ಬಣ್ಣಗಳ ಚಿತ್ತಾರದ ಕಲರವ ಮೂಡಿಸುವ ಚಿತ್ರಸಂತೆಗೆ ವರ್ಚುವಲ್ ಎಫೆಕ್ಟ್ ನೀಡಲಾಗುತ್ತಿದೆ. 

ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಚಿತ್ರಸಂತೆ ಆನ್'ಲೈನ್ ನಲ್ಲಿ ನಡೆಯಲಿದ್ದು, ದಾಖಲೆ ನಿರ್ಮಿಸಲಿದೆ. ಜ.3ರಿಂದ ಆರಂಬವಾಗುವ 18ನೇ ಚಿತ್ರಸಂತೆಯನ್ನು ಕೊರೋನಾ ಯೋಧರಿಗೆ ಅರ್ಪಿಸಲಾಗುತ್ತಿದೆ. 

ಪ್ರತೀ ವರ್ಷ ಜನವರಿಯ ಮೊದಲ ವಾರದಂದು ಚಿತ್ರಸಂತೆ ನಡೆಯುತ್ತಿದೆ. ಆದರೆ, 2021ರ ಜ.3ರಿಂದ ಒಂದು ತಿಂಗಳು ಚಿತ್ರಸಂತೆ ಏರ್ಪಡಿಸಲಾಗಿದೆ. ಕಳೆದ ವರ್ಷ ಚಿತ್ರಸಂತೆಯನ್ನು ನೇಗಿಲ ಯೋಗಿ ಎಂಬ ಶೀರ್ಷಿಕೆಯಡಿ ರೈತರಿಗೆ ಸಮರ್ಪಿಸಲಾಗಿತ್ತು. ಚಿತ್ರಸಂತೆಗೆ ಲಕ್ಷಾಂತರ ಜನರು ಆಗಮಿಸಿ ಕಲಾಚಾತ್ರೆಗೆ ಸಾಕ್ಷಿಯಾಗುತ್ತಾರೆ. ಆದರೆ, ಈ ವರ್ಷ ಕೊರೋನಾ ವೈರಸ್ ಇರುವುದರಿಂದ ಕಲಾವಿದರು ಮತ್ತು ಕಲಾಸಕ್ತರ ಸುರಕ್ಷತೆ ದೃಷ್ಟಿಯಿಂದ ಆನ್'ಲೈನ್ ನಲ್ಲಿ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. 

ಇದೇ ಸಂದರ್ಭದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು 60 ವರ್ಷವನ್ನು ಪೂರೈಸುತ್ತಿದೆ. ಹೀಗಾಗಿ ಈ ವರ್ಷದ ಚಿತ್ರಸಂತೆಗೆ ಪರಿಷತ್ತಿನ ವಜ್ರಮಹೋತ್ಸವದ ಚಿತ್ರಸಂತೆಗೆ ಪರಿಷತ್ತಿನ ವಜ್ರಮಹೋತ್ಸವದ ಸಂಭ್ರಮವೂ ಜೊತೆಯಾಗಿದೆ. ಕೋವಿಡ್ ಇದ್ದರೂ ಚಿತ್ರಸಂತೆ ನಿಲ್ಲಿಸಬಾರದು ಎಂಬ ಕಾರಣದಿಂದ ವರ್ಚುವಲ್'ನಲ್ಲಿ ನಡೆಸಲಾಗುತ್ತಿದೆ. ಚಿತ್ರ ಜಾತ್ರೆಯನ್ನು ಆನ್'ಲೈನ್ ನಲ್ಲಿ ರೂಪಿಸುತ್ತಿರುವುದು ನಮಗೂ ಸವಾಲಾಗಿದೆ. 

ತಜ್ಞರೊಂದಿಗೆ ಚರ್ಚಿಸಿ ಸಕಲ ಸಿದ್ಧತೆ ಮಾಡಿಕೊಳ್ಳಬೇಕಿದೆ. ಈ ರೀತಿಯ ದೊಡ್ಡ ಮಟ್ಟದಲ್ಲಿ ಚಿತ್ರಸಂತೆ ಆನ್'ಲೈನ್'ನಲ್ಲಿ ನಡೆದಿಲ್ಲ. ಇದೊಂದು ದಾಖಲೆಯಾಗಲಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT