ವಿವಾದಕ್ಕೆಡೆಯಾದ ಗೋಡೆಬರಹ 
ರಾಜ್ಯ

ಮಂಗಳೂರು: ಕೋರ್ಟ್ ಆವರಣದಲ್ಲಿ ಮತ್ತೊಂದು ವಿವಾದಾತ್ಮಕ ಗೋಡೆಬರಹ ಪತ್ತೆ

ಕರಾವಳಿ ನಗರಿ ಮಂಗಳೂರಿನಲ್ಲಿ ಇತ್ತೀಚೆಗೆ ದುಷ್ಕರ್ಮಿಗಳು ಪ್ರಚೋದನಾಕಾರಿ ಬರಹ ಬರೆದು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಘಟನೆ ವರದಿಯಾಗುತ್ತಲಿದೆ. ಇದೇ ಬಗೆಯ ಘಟನೆ ಮತ್ತೆ ಘಟಿಸಿದ್ದು ಈ ಬಾರಿ ನಗರದ ನ್ಯಾಯಾಲಯದ ಆವರಣವೊಂದರ ಮೇಲೆ ಉರ್ದು ಭಾಷೆಯ ಸಾಲುಗಳನ್ನು ಬರೆಯಲಾಗಿದೆ.

ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ಇತ್ತೀಚೆಗೆ ದುಷ್ಕರ್ಮಿಗಳು ಪ್ರಚೋದನಾಕಾರಿ ಬರಹ ಬರೆದು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಘಟನೆ ವರದಿಯಾಗುತ್ತಲಿದೆ. ಇದೇ ಬಗೆಯ ಘಟನೆ ಮತ್ತೆ ಘಟಿಸಿದ್ದು ಈ ಬಾರಿ ನಗರದ ನ್ಯಾಯಾಲಯದ ಆವರಣವೊಂದರ ಮೇಲೆ ಉರ್ದು ಭಾಷೆಯ ಸಾಲುಗಳನ್ನು ಬರೆಯಲಾಗಿದೆ.

ನವೆಂಬರ್ 29 ರ ಭಾನುವಾರ ಬೆಳಿಗ್ಗೆ, ನ್ಯಾಯಾಲಯದ ಆವರಣದಲ್ಲಿರುವ ಹಳೆಯ ಪೊಲೀಸ್ ಔಟ್ ಪೋಸ್ಟ್ ನ ಗೋಡೆಯ ಮೇಲೆ ವಿವಾದಾತ್ಮಕ ಬರಹ ಪತ್ತೆಯಾಗಿದೆ. ನವೆಂಬರ್ 28 ರ ಶನಿವಾರ ಬರೆಯಲಾಗಿದೆ ಎನ್ನಲಾದ ಈ ಬರಹ ಭಾನುವಾರ ಎಲ್ಲರ ಗಮನಕ್ಕೆ ಬಂದಿದೆ. 

ಉರ್ದು ಭಾಷೆಯ ಈ ಸಾಲುಗಳನ್ನು ಇಂಗ್ಲಿಷ್ ಲಿಪಿಯಲ್ಲಿ ಬರೆದಿದೆ. 'ಗುಸ್ತಾಕ್ ಇ ರಸೂಲ್ ಕಿ ಇಕ್ ಹಿ ಸಾಜಾ, ಸಾರ್ ತನ್ ಸೇ ಜುಡಾ' (ಪ್ರವಾದಿಗೆ ಕೋಪ ಬಂದರೆ ದೇಹದಿಂದ ತಲೆ ಬೇರ್ಪಡುವುದೊಂದೇ ಶಿಕ್ಷೆ) ಎಂದು ಕಿಡಿಗೇಡಿಗಳು ಬರೆದಿರುವುದು ಇದೀಗ ಹೊಸ ವಿವಾದಕ್ಕೆ ನಾಂದಿಯಾಗಿದೆ. 

ಈ ಬಗ್ಗೆ ಮಾಹಿತಿ ತಿಳಿದೊಡನೆ ಬಂದರು ಪೋಲೀಸ್ ಠಾಣೆಯ ಪೋಲೀಸರು ಸ್ಥಳಕ್ಕೆ ಆಗಮಿಸಿ ವಿವಾದಾತ್ಮಕ ಬರಹ ಅಳಿಸಿ ಹಾಕಿದ್ದಾರೆ ಮತ್ತು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದಕ್ಕೆ ಹಿಂದೆ ನವೆಂಬರ್ 27 ಶುಕ್ರವಾರ, ಬಿಜೈನ ಅಪಾರ್ಟ್ ಮೆಂಟ್ ನ ಗೋಡೆಯೊಂದರ ಮೇಲೆ ಉಗ್ರ ಸಂಘಟನೆಗಳನ್ನು ಬೆಂಬಲಿಸುವ ಇಂತಹುದೇ ವಿವಾದಾತ್ಮಕ ಬರಹ ಕಂಡುಬಂದಿತ್ತು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT