ನಾಗರಹೊಳೆಯಲ್ಲಿ ಚಿಟ್ಟೆ ಗಣತಿ 
ರಾಜ್ಯ

ನಾಗರಹೊಳೆಯಲ್ಲಿ ಚಿಟ್ಟೆ ಗಣತಿ

ಇದೇ ಮೊದಲ ಬಾರಿಗೆ ನಾಗರಹೊಳೆ ಹುಲಿ ಮೀಸಲು ಪ್ರದೇಶದಲ್ಲಿ ಚಿಟ್ಟೆ ಗಣತಿಯನ್ನು ರಾಜ್ಯ ಅರಣ್ಯ ಇಲಾಖೆ ಕೈಗೆತ್ತಿಕೊಂಡಿದೆ. 

ನಾಗರಹೊಳೆ: ಇದೇ ಮೊದಲ ಬಾರಿಗೆ ಚಿಟ್ಟೆ ಗಣತಿಯನ್ನು ರಾಜ್ಯ ಅರಣ್ಯ ಇಲಾಖೆ ಕೈಗೆತ್ತಿಕೊಂಡಿದೆ. 

ನಾಗರಹೊಳೆ ಹುಲಿ ಮೀಸಲು ಪ್ರದೇಶ ( ಎನ್ ಟಿಆರ್) ದಲ್ಲಿ ಗಣತಿ ನಡೆಯಲಿದ್ದು, ಚೆಕ್ ಲಿಸ್ಟ್ ನ್ನು ತಯಾರಿಸುವ ಉದ್ದೇಶ ಹೊಂದಲಾಗಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ನಾಗರಹೊಳೆಯಲ್ಲಿ ಚಿಟ್ಟೆ ಉದ್ಯಾನವನವನ್ನು ಕಾಣಬಹುದಾಗಿದೆ.

ಕೇಂದ್ರ ಸರ್ಕಾರ ರಾಷ್ಟ್ರೀಯ ಚಿಟ್ಟೆ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿರುವಾಗ ರಾಜ್ಯದಲ್ಲಿ ಚಿಟ್ಟೆ ಗಣತಿ ನಡೆಯುತ್ತಿರುವುದು ಮಹತ್ವ ಪಡೆದುಕೊಂಡಿದೆ. 

ಕರ್ನಾಟಕ ಈಗಾಗಲೇ ತನ್ನದೇ ರಾಜ್ಯ ಚಿಟ್ಟೆಯನ್ನು ಗುರುತಿಸಿದ್ದು, ರಾಜ್ಯ ಧ್ವಜದ ಬಣ್ಣವನ್ನೇ ಹೋಲುವ ಸದರ್ನ್ ಬರ್ಡ್‌ವಿಂಗ್ (ಟ್ರಾಯ್ಡ್ಸ್ ಮಿನೋಸ್) ಎಂಬ ಚಿಟ್ಟೆಗೆ ರಾಜ್ಯ ಚಿಟ್ಟೆ ಸ್ಥಾನವನ್ನು ನೀಡಿದೆ. 

ಸಸ್ಯ ಮತ್ತು ಪಕ್ಷಿಸಂಕುಲದ ಚೆಕ್ ಲಿಸ್ಟ್ ನ್ನು ತಯಾರಿಸುವುದರ ಜೊತೆಗೆ ಚಿಟ್ಟೆಗಳ ಚೆಕ್ ಲಿಸ್ಟ್ ನ್ನೂ ತಯಾರಿಸಲು ಮುಂದಾಗಿದ್ದು ಅ.8 ರಿಂದ 2021 ರ ಜೂನ್-ಜುಲೈ ವರೆಗೂ ನಡೆಯಲಿದೆ. ಇದೇ ವೇಳೆ ಶಾಖಾಹಾರಿ ಪ್ರಾಣಿಗಳ ಗಣತಿಯೂ ನಡೆಯಲಿದೆ.

ಬಹಳಷ್ಟು ದೊಡ್ಡ ಸಂಖ್ಯೆಯಲ್ಲಿರುವ ಸಂಕುಲಗಳಿಗೆ ಹೆಚ್ಚಿನ ಮಹತ್ವ ಸಿಗಲಿದೆ ಆದರೆ ಬೇರೆ ಜೀವಿಗಳೆಡೆಗೂ ಗಮನ ಹರಿಸುವ ಅಗತ್ಯವಿದೆ, ಪರಾಗಸ್ಪರ್ಶಕ್ಕೆ ಚಿಟ್ಟೆಗಳು ಅತ್ಯವಶ್ಯಕ, ಆದ್ದರಿಂದ ಈ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಎನ್ ಟಿ ಆರ್ ನ ನಿರ್ದೇಶಕ ಮಹೇಶ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT