ರಾಜ್ಯ

ಬೆಂಗಳೂರು ಗಲಭೆ ಪ್ರಕರಣ: ಈಗ ನನಗೆ ಹೆಚ್ಚು ಭಯವಾಗುತ್ತಿದೆ- ಶಾಸಕ ಅಖಂಡ ಶ್ರೀನಿವಾಸಮೂರ್ತಿ

Manjula VN

ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿರುವ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ನಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಅವರ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರು, ಈಗ ನನಗೆ ಹೆಚ್ಚು ಭಯವಾಗುತ್ತಿದೆ. ಭದ್ರತೆಗಾಗಿ ಸರ್ಕಾರದ ಮೊರೆ ಹೋಗಲಾಗುತ್ತದೆ ಎಂದು ಹೇಳಿದ್ದಾರೆ. 

ದಾಳಿ ನಿಜಕ್ಕೂ ಅನಿರೀಕ್ಷಿತವಾದದ್ದು. ಶಾಸಕನಾಗಿರುವ ನಾನು ನನ್ನ ಕ್ಷೇತ್ರದ ಪ್ರತೀ ವಾರ್ಡ್'ಗೂ ಭೇಟಿ ನೀಡುತ್ತೇನೆ. ಅದೇ ರೀತಿ ಸಂಪತ್ ರಾಜ್ ಅವರ ಜೊತೆಗೂ ಮಾತನಾಡುತ್ತಿದೆ. ನನ್ನ ಬಗ್ಗೆ ತಿಳಿದಿರುವ ವ್ಯಕ್ತಿ, ಹಗೆ ಸಾಧಿಸಲು ಕಾಯುತ್ತಿರುವ ವ್ಯಕ್ತಿ ಈ ರೀತಿ ದಾಳಿ ಮಾಡಲು ಸಾಧ್ಯ ಎಂದು ಹೇಳಿದ್ದಾರೆ. 

ಚಾರ್ಜ್ ಶೀಟ್ ಬಳಿಕ ನನಗೆ ಹೆಚ್ಚು ಭಯವಾಗುತ್ತಿದೆ. ನನಗೆ ಈಗ ಹೆಚ್ಚು ಭದ್ರತೆ ಬೇಕಿದೆ. ಈ ಬಗ್ಗೆ ನಾನು ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸುತ್ತೇನೆ. ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಅಥವಾ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ನನ್ನ ಭದ್ರತೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ.

SCROLL FOR NEXT