ಸಂಗ್ರಹ ಚಿತ್ರ 
ರಾಜ್ಯ

ವಿಧಾನಸೌಧದ ಆಯುಧ ಪೂಜೆ ಮೇಲೂ ಕೊರೋನಾ ಕರಿನೆರಳು!

ರಾಜ್ಯದ ಶಕ್ತಿ ಕೇಂದ್ರವಾಗಿರುವ ವಿಧಾನಸೌಧದಲ್ಲಿಯೂ ಪ್ರತೀವರ್ಷ ಹಬ್ಬವನ್ನು ಆಚರಿಸಿಕೊಂಡು ಬರಲಾಗಿದೆ. ಆದರೆ, ಈ ಬಾರಿ ಈ ಹಬ್ಬದ ಆಚರಣೆ ಮೇಲೆ ಕೊರೋನಾದ ಕರಿನೆರಳು ಬಿದ್ದಿದೆ. 

ಬೆಂಗಳೂರು: ದಸರಾ ಹಬ್ಬವನ್ನು ನಾಡ ಹಬ್ಬ, ನಮ್ಮ ನೆಲದ ಹಬ್ಬ ಎಂದು ಕರೆಯಲಾಗುತ್ತದೆ. ಪ್ರತೀವ್ರ ಈ ಹಬ್ಬವನ್ನು ರಾಜ್ಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ರಾಜ್ಯದ ಶಕ್ತಿ ಕೇಂದ್ರವಾಗಿರುವ ವಿಧಾನಸೌಧದಲ್ಲಿಯೂ ಪ್ರತೀವರ್ಷ ಹಬ್ಬವನ್ನು ಆಚರಿಸಿಕೊಂಡು ಬರಲಾಗಿದೆ. ಆದರೆ, ಈ ಬಾರಿ ಈ ಹಬ್ಬದ ಆಚರಣೆ ಮೇಲೆ ಕೊರೋನಾದ ಕರಿನೆರಳು ಬಿದ್ದಿದೆ. 

ಕೊರೋನಾ ಭೀತಿಯೊಂದಿಗೆ ಈ ಬಾರಿ ಹಬ್ಬ ಅಕ್ಟೋಬರ್ 25 ರಂದು ಭಾನುವಾರ ಬಂದಿದೆ. ಈಗಾಗಲೇ ಹಬ್ಬದ ಆಚರಣೆಗೆ ಕುರಿತು ಸರ್ಕಾರ ಸಾಕಷ್ಟು ನಿರ್ಬಂಧಗಳನ್ನೂ ವಿಧಿಸಿದ್ದು, ಈ ಹಿಂದಿನ ಸಡಗರಕ್ಕಿಂತಲೂ ಈ ಬಾರಿ ಹಬ್ಬದ ಆಚರಣೆಯಲ್ಲಿ ಸಂಭ್ರಮ ಕೊಂಚ ಕಡಿಮೆಯಾಗಲಿದೆ. ಹಬ್ಬ ಭಾನುವಾರದ ರಜಾದಿನ ಬಂದಿದ್ದರೂ ಆಯಾ ಇಲಾಖೆಯ ಸಿಬ್ಬಂದಿಗಳು ಸರಳವಾಗಿ ಆಚರಿಸುವುದಾಗಿ ತಿಳಿಸಿದ್ದಾರೆ. 

ಈ ಬಾರಿಯ ಹಬ್ಬದ ಆಚರಣೆಯಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಸಚಿವರು ಭಾಗಿಯಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರೂ ಕೂಡ ಹಬ್ಬದ ಆಚರಣೆಯಿಂದ ದೂರ ಉಳಿದಿದ್ದಾರೆಂದು ಹೇಳಲಾಗುತ್ತಿದೆ. 

ಈ ನಡುವೆ ಆಯಾ ಇಲಾಖೆಯ ಸಿಬ್ಬಂದಿಗಳು ಪೂಜೆಗಾಗಿ ಅರ್ಚಕರನ್ನು ಕರೆದಿದ್ದು, ಅರ್ಚಕರೇ ವಿಧಾಸೌಧದಲ್ಲಿರುವ ಎಲ್ಲಾ ವಸ್ತು, ಆಯುಧಗಳಿಗೂ ಪೂಜೆ ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ. 

ಸಾಮಾನ್ಯವಾಗಿ ದಸರಾ ಹಬ್ಬ ಬರುತ್ತಿದ್ದಂತೆ ಸಚಿವರು ತಮ್ಮ ಇಲಾಖೆಯ ಸಿಬ್ಬಂದಿಗಳಿಗೆ ಉಡುಗೊರೆ, ಸ್ವೀಕ್ ಬಾಕ್ಸ್ ಹಾಗೂ ಬಟ್ಟೆಗಳನ್ನು ನೀಡುತ್ತಿದ್ದರು. ಆದರೆ, ಈ ಬಾರಿ ಆ ಸಡಗರವೆಲ್ಲವೂ ಮರೆಯಾಗಲಿದೆ. ಅರ್ಚಕರನ್ನು ಸಚಿವರು ಕರೆಸುತ್ತಿಲ್ಲ. ಸಿಬ್ಬಂದಿಗಳೇ ಎಲ್ಲವನ್ನು ನಿಭಾಯಿಸುವಂತೆ ತಿಳಿಸಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ನಡುವೆ ವಿಧಾನಸೌಧದ ಆವರಣದಲ್ಲಿರುವ ಪೊಲೀಸ್ ಠಾಣೆಯನ್ನು ಅಲಂಕೃತಗೊಳಿಸಲಾಗುತ್ತಿದ್ದು, ಆಯುಧಗಳನ್ನು ಜಾಗೃತರಾಗಿ ಸ್ವಚ್ಛಗೊಳಿಸುವ ಕಾರ್ಯಗಳನ್ನು ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT