ರಾಜ್ಯ

ಆಯುಧಪೂಜೆ; ರಾಜ್ಯದ ಜನತೆಗೆ ಶುಭಾಶಯ ಕೋರಿದ ಗಣ್ಯರು

Manjula VN

ಬೆಂಗಳೂರು: ನವರಾತ್ರಿ ಹಿನ್ನೆಲೆಯಲ್ಲಿ ಹಲವು ಗಣ್ಯರು ನಾಡಿನ ಜನತೆಗೆ ಭಾನುವಾರ ಶುಭಾಶಯಗಳನ್ನು ಕೋರಿದ್ದಾರೆ. 

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಟ್ವೀಟ್ ಮಾಡಿ, ಮಾತೆ ಸಿದ್ಧಿದಾತ್ರಿಯು ಸಕಲ ಸಿದ್ಧಿಗಳನ್ನು ಕರುಣಿಸಿ ಆಶೀರ್ವದಿಸಲಿ ಎಂದು ನವರಾತ್ರಿಯ ಒಂಭತ್ತನೇ ದಿನವಾದ ಇಂದು ಸಿದ್ಧಿದಾತ್ರಿಯನ್ನು ಪೂಜಿಸೋಣ ಎಂದು ಹೇಳಿದರು.

ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿ, ಭಾರತದ ಸಂಸ್ಕೃತಿಯ ಮೂಲ ಶಕ್ತಿಯ ಆರಾಧನೆ, ತಮಗೆಲ್ಲರಿಗೂ ಶಕ್ತಿಯ ಆರಾಧನೆಯ ನವರಾತ್ರಿಯ ಶುಭಾಶಯಗಳು. ಜಗನ್ಮಾತೆಯ ಕೃಪೆ ಸದಾ ನಮ್ಮೆಲ್ಲರ ಮೇಲಿರಲಿ, ತಾಯಿ ಚಾಮುಂಡೇಶ್ವರಿ ನಮ್ಮೆಲ್ಲರನ್ನು ಹರಸಿ ಹಾರೈಸಲಿ ಎಂದು ತಿಳಿಸಿದ್ದಾರೆ.

SCROLL FOR NEXT