ರಾಜ್ಯ

ಬಾಗಲಕೋಟೆ: ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲು

Vishwanath S

ಬಾಗಲಕೋಟೆ: ಮಲಪ್ರಭಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬದಾಮಿ ಪಟ್ಟಣದಲ್ಲಿ ವರದಿಯಾಗಿದೆ.

ಬಾಚಿನಗುಡ್ಡ ಗ್ರಾಮದವರಾದ 12 ವರ್ಷದ ಬಸವರಾಜ್ ಮಾಂತಯ್ಯ ಹಿರೇಮಠ, ಪ್ರವೀಣ್(12) ರೋಣದ ಮೃತ ಬಾಲಕರು.

ಅಕ್ಟೋಬರ್ 29ರಂದು ಸಂಜೆ ನದಿಗೆ ಈಜಲು ಹೋಗಿದ್ದ ಬಾಲಕರು ಮನೆಗೆ ವಾಪಸ್ ಬಂದಿರಲಿಲ್ಲ. ಹೀಗಾಗಿ ಬಾಲಕರಿಗಾಗಿ ಶೋಧ ಕಾರ್ಯ ನಡೆದಿದ್ದು ಇಂದು ಮೃತದೇಹಗಳು ಪತ್ತೆಯಾಗಿವೆ. 

ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನಿಖೆ ಕೈಗೊಂಡಿದ್ದಾರೆ.

SCROLL FOR NEXT