ರಾಜ್ಯ

ಎಪಿಎಂಸಿಯಲ್ಲಿ 50 ಕೋಟಿ ರೂ.ಹಣ ದುರುಪಯೋಗ: ಸೂತ್ರಧಾರ ವಿಜಯ್ ಆಕಾಶ್ ಸೇರಿ ಮೂವರ ಬಂಧನ

Shilpa D

ಬೆಂಗಳೂರು: ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ವಂಚನೆ ಪ್ರಕರಣದ ಸೂತ್ರಧಾರ ವಿಜಯ್ ಆಕಾಶ್ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಚೆನ್ನೈನಲ್ಲಿ ತಲೆಮರೆಸಿಕೊಂಡಿದ್ದ ಚೆನ್ನೈ ನಿವಾಸಿ ವಿಜಯ್ ಆಕಾಶ್ (57), ಪ್ರೇಮ್‌ರಾಜ್ (32) ಹಾಗೂ ದಿನೇಶ್ ಬಾಬುಜಿ ಬಂಧಿತ ಆರೋಪಿಗಳು.

ಪ್ರಕರಣಕ್ಕೆ ಸಂಬಂಧಿಸಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಸಿಬಿ ಈ ಪ್ರಕರಣದ ತನಿಖೆ ವಹಿಸಿಕೊಂಡು ಒಟ್ಟು 15 ಆರೋಪಿಗಳನ್ನು ಬಂಧಿಸಿ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.

SCROLL FOR NEXT