ಷರಿಯಾ ಕಾನೂನು ಮುಂದಿಟ್ಟು ಎರಡನೇ ವಿವಾಹ ಸಮರ್ಥಿಸಿದವನ ವಾದ ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್ 
ರಾಜ್ಯ

ಷರಿಯಾ ಕಾನೂನು ಮುಂದಿಟ್ಟು ಎರಡನೇ ವಿವಾಹ ಸಮರ್ಥಿಸಿದವನ ವಾದ ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್ 

ಷರಿಯಾ ಕಾನೂನನ್ನು ಮುಂದಿಟ್ಟುಕೊಂಡು ತನ್ನ ಎರಡನೇ ವಿವಾಹವನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ ವ್ಯಕ್ತಿಯೋರ್ವನ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ. 

ಬೆಂಗಳೂರು: ಷರಿಯಾ ಕಾನೂನನ್ನು ಮುಂದಿಟ್ಟುಕೊಂಡು ತನ್ನ ಎರಡನೇ ವಿವಾಹವನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ ವ್ಯಕ್ತಿಯೋರ್ವನ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ. 

ಎರಡನೇ ವಿವಾಹ ಮೊದಲನೇ ಪತ್ನಿಗೆ ಮಾಡುವ ಅಗಾಧವಾದ ಕ್ರೌರ್ಯ ಎಂದು ಹೇಳಿದೆ. 

ಮುಸ್ಲಿಮರ ಕಾನೂನಿನಲ್ಲಿ ಬಹುಪತ್ನಿತ್ವ ಮಾನ್ಯವಿರಬಹುದು ಆದರೆ ಅದು ಮೊದಲ ಪತ್ನಿಯೆಡೆಗೆ ಅಗಾಧವಾದ ಕ್ರೌರ್ಯ ಎಂದು ವಿಚಾರಣೆ ವೇಳೆ ಹೈಕೋರ್ಟ್ ನ ಕಲಬುರಗಿ ವಿಭಾಗದ ಹೈಕೋರ್ಟ್ ಪೀಠದ ನ್ಯಾ. ಕೃಷ್ಣ ಎಸ್ ದೀಕ್ಷಿತ್, ನ್ಯಾ.ಪಿ ಕೃಷ್ಣಭಟ್ ಹೇಳಿದ್ದಾರೆ. ಈ ಮೂಲಕ ಕೆಳ ಹಂತದ ನ್ಯಾಯಾಲಯ ನೀಡಿದ್ದ ತೀರ್ಪನ್ನು ಅನೂರ್ಜಿತಗೊಳಿಸಬೇಕೆಂದು ಯೂಸೂಫ್ ಪಟೇಲ್ ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. 

ವಿಜಯಪುರದ ನಿವಾಸಿ ಯೂಸೂಫ್ ಎಂಬಾತ 2014 ರಲ್ಲಿ ರಾಮ್ಜಾನ್ಭಿ ಎಂಬ ಮಹಿಳೆಯನ್ನು ಷರಿಯಾ ಕಾನೂನಿನ ಪ್ರಕಾರ ವಿವಾಹವಾಗಿದ್ದ ಇದಾದ ಕೆಲವೇ ದಿನಗಳಲ್ಲಿ ಎರಡನೇ ವಿವಾಹ ಮಾಡಿಕೊಂಡಿದ್ದ. 

ಎರಡನೇ ವಿವಾಹವನ್ನು ಪ್ರಶ್ನಿಸಿ ಮೊದಲ ಪತ್ನಿ ಕೋರ್ಟ್ ಮೆಟ್ಟಿಲೇರಿ ಅನೂರ್ಜಿತಗೊಳಿಸಬೇಕೆಂದು ಮನವಿ ಮಾಡಿದ್ದರು. ಅಷ್ಟೇ ಅಲ್ಲದೇ ಪತಿಯ ಮನೆಯವರು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆಂದೂ ಆರೋಪಿಸಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಯೂಸೂಫ್, ತಾನು ಮೊದಲ ಪತ್ನಿಯನ್ನು ಪ್ರೀತಿಸುತ್ತೇನೆ, ಆದರೆ ಷರಿಯಾ ಕಾನೂನಿನ ಪ್ರಕಾರ ಎರಡು ವಿವಾಹವಾಗುವುದಕ್ಕೆ ಅವಕಾಶವಿದೆ. ತಮ್ಮದು ಪ್ರಬಹವಿ ಕುಟುಂಬವಾಗಿದ್ದು, ಪೋಷಕರ ಒತ್ತಡಕ್ಕೆ ಮಣಿದು ಎರಡನೇ ವಿವಾಹವಾದೆ ಎಂದು ವಾದಿಸಿದ್ದರು. ಆದರೆ ಈ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT