ರಾಜ್ಯ

ಹಾವೇರಿ: ಎತ್ತಿನ ಬಂಡಿ ಸಮೇತ ಇಬ್ಬರು ಯುವಕರು ನದಿ ಪಾಲು, ಮುಂದುವರೆದ ಶೋಧ ಕಾರ್ಯ

Raghavendra Adiga

ಹಾವೇರಿ:ತುಂಗಭದ್ರಾ ನದಿ ನೀರಿನಲ್ಲಿ ಎತ್ತಿನ ಬಂಡಿ ಸಮೇತ ಇಬ್ಬರು ಯುವಕರು ಕೊಚ್ಚಿಹೋಗಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಣನತಂಬಿ-ನಿಟ್ಟೂರು ಕ್ರಾಸ್ ಗ್ರಾಮ ಬಳಿ ಸೋಮವಾರ ನಡೆದಿದೆ.

ಆರೆಮಲ್ಲಾಪುರ ಗ್ರಾಮದ ಬೆಟ್ಟಪ್ಪ ಮೋಹನ್ ಮುಳ್ಳಿನ(25), ಮತ್ತು ಜಗದೀಶ ವೆಂಕಪ್ಪ (23) ನದಿ ಪಾಲಾದವರು.

ಕೋಣನತಂಬಿಗಿ - ನಿಟ್ಟೂರು ಕ್ರಾಸ್ ತುಂಗಭದ್ರಾ ನದಿ ನೀರಿನಲ್ಲಿ ಮರಳು ತುಂಬಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಎರಡು ಎತ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ತಿಳಿದು ಬಂದಿದೆ. 

ಸಧ್ಯ ಯುವಕರ ಶೋಧ ಕಾರ್ಯಾಚರಣೆ ಮುಂದುವರಿದಿದ್ದು ರಾಣಿಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

SCROLL FOR NEXT