ರಾಜ್ಯ

ಸಚಿವ ಆನಂದ್ ಸಿಂಗ್ ಸಹೋದರಿ ಮನೆ ಮೇಲೆ ಎಸ್ ಐಟಿ ದಾಳಿ 

Shilpa D

ಬಳ್ಳಾರಿ: ಸಚಿವ ಆನಂದ್ ಸಿಂಗ್ ಅವರ ಸಹೋದರಿ ರಾಣಿ ಸಂಯುಕ್ತ ಅವರ ಮನೆ ಮತ್ತು ಕಚೇರಿ ಮೇಲೆ ಎಸ್ ಐ ಟಿ ತಂಡ ದಾಳಿ ನಡೆಸಿದೆ.

ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಹೊಸಪೇಟೆ ಗಣಿ ಮಾಲೀಕರಾದ ರಾಣಿ ಸಂಯುಕ್ತ ಅವರ ಎರಡು ಮನೆ ಮತ್ತು ಕಚೇರಿಯ ಮೇಲೆ ಎಸ್.ಐ.ಟಿ‌.ದಾಳಿ. ಜೋಳದ ರಾಶಿ ಗುಡ್ಡದ ಬಳಿಯಿರುವ ರಾಣಿ ಸಂಯುಕ್ತ ಹೊಸ ಮನೆ, ಕಾಲೇಜು ರಸ್ತೆಯಲ್ಲಿನ ಹಳೇ ನಿವಾಸ ಹಾಗೂ ಎಂ.ಪಿ.ಪ್ರಕಾಶ್ ನಗರದಲ್ಲಿರುವ ಕಚೇರಿಯ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೃಷ್ಣ ಮಿನರಲ್ಸ್ ಮೇಲೆ ಇದ್ದ ಹಳೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣಿ ಸಂಯುಕ್ತ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಇನ್ಸ್‌ಪಕ್ಟರ್ ಲಕ್ಷ್ಮಿನಾರಾಣ ಹಾಗೂ ರಾಘವೇಂದ್ರ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದೆ.

SCROLL FOR NEXT