ರಾಜ್ಯ

ಪ್ರವಾಹ ಪೀಡಿತ ಉಡುಪಿ ಜಿಲ್ಲೆ ಗ್ರಾಹಕರಿಗೆ ನೆರವು ನೀಡಲು ಮುಂದಾದ ಹ್ಯುಂಡೈ ಕಂಪನಿ

Shilpa D

ನವದೆಹಲಿ: ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳ ಗ್ರಾಹಕರಿಗೆ ಪರಿಹಾರ ನೀಡಲು ಹ್ಯುಂಡೈ ಕಂಪನಿ ಮುಂದಾಗಿದ್ದು ಈ ಸಂಬಂಧ ಕಾರ್ಯಪಡೆ ರಚಿಸಿದೆ.

ರಾಜ್ಯದ ಪ್ರವಾಹ ಪೀಡಿತ ಉಡುಪಿ ಜಿಲ್ಲೆಯ ಹ್ಯುಂಡೈ ಗ್ರಾಹಕರಿಗೆ ನೆರವು ನೀಡಲು ಮುಂದಾಗಿದೆ. ಕಂಪನಿಯು ಪ್ರವಾಹ ಪೀಡಿತ ಪ್ರದೇಶಗಳ ವಾಹನಗಳ ವಿಮೆ ಮೇಲೆ ಡಿಪ್ರಿಯಿಸಿಯೇಷನ್ ಮೊತ್ತದ ಮೇಲೆ ಶೇಕಡಾ 50 ರಷ್ಟು ರಿಯಾಯಿತಿ ನೀಡಲು ನಿರ್ಧರಿಸಿದೆ. 

ಈ ಪ್ರತಿಕೂಲ ಸಮಯದಲ್ಲಿ ನಾವು ಉಡುಪಿಯಲ್ಲಿ ಪ್ರವಾಹ ಪೀಡಿತ ಗ್ರಾಹಕರಿಗೆ ನಮ್ಮ ಸೇವಾ ಬೆಂಬಲವನ್ನು ಹೆಚ್ಚಿಸಿದ್ದೇವೆ. ಉಡುಪಿ ಜನರ ಜೊತೆ ನಾವು ಅವರ ಸಹಾಯಕ್ಕೆ ನಿಂತಿದ್ದೇವೆ, ಪ್ರವಾಹದಿಂದ ಹಾನಿಗೊಳಗಾಗಿರುವ ಅವರ ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ನಾವು ಜೊತೆಯಾಗಿ ನಿಲ್ಲುತ್ತೇವೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ನಿರ್ದೇಶಕ ತರುಣ್ ಗರ್ಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

SCROLL FOR NEXT