ತಿಮಿಂಗಲದ ಅಸ್ಥಿಪಂಜರ 
ರಾಜ್ಯ

ಧಾರವಾಡದ ತಿಮಿಂಗಲದ ಅಸ್ಥಿಪಂಜರ ಹೊಸ ಸಂಸತ್ ಭವನಕ್ಕೆ ಶಿಫ್ಟ್?

ಕರ್ನಾಟಕ ವಿಶ್ವವಿದ್ಯಾಲಯದ ಸಾಗರ ಜೀವಶಾಸ್ತ್ರ ವಿಭಾಗದಲ್ಲಿ ಪ್ರದರ್ಶಿಸಲಾದ ತಿಮಿಂಗಿಲದ ಅಸ್ಥಿಪಂಜರವು ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆಯ ತಜ್ಞರ ಗಮನ ಸೆಳೆದಿದ್ದು,  ದೆಹಲಿಯ ಹೊಸ ಸಂಸತ್ತಿನ ಭವನದಲ್ಲಿ ಪ್ರದರ್ಶಿಸಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರವಾರ: ಕರ್ನಾಟಕ ವಿಶ್ವವಿದ್ಯಾಲಯದ ಸಾಗರ ಜೀವಶಾಸ್ತ್ರ ವಿಭಾಗದಲ್ಲಿ ಪ್ರದರ್ಶಿಸಲಾದ ತಿಮಿಂಗಿಲದ ಅಸ್ಥಿಪಂಜರವು ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆಯ ತಜ್ಞರ ಗಮನ ಸೆಳೆದಿದ್ದು,  ದೆಹಲಿಯ ಹೊಸ ಸಂಸತ್ತಿನ ಭವನದಲ್ಲಿ ಪ್ರದರ್ಶಿಸಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

1971 ರಲ್ಲಿ  ಭಟ್ಕಳದ ಸಮುದ್ರ ತೀರಕ್ಕೆ ತಿಮಿಂಗಲದ ಅಸ್ಥಿಪಂಜರ ತೇಲಿ ಬಂದಿತ್ತು. ಎನ್ ಐಒ ನಿರ್ದೇಶಕ ಶ್ರೀಧರ್ ಮತ್ತು ಇತರರ ಪರಿಶ್ರಮದಿಂದಾಗಿ ಅದನ್ನು ಸುರಕ್ಷಿತವಾಗಿಟ್ಟಿದ್ದಾರೆ.  

ಹೊಸದಾಗಿ ನಿರ್ಮಾಣವಾಗುತ್ತಿರುವ ಸಂಸತ್ ಭವನದಲ್ಲಿ ಇಂಥ ಅಪರೂಪದ ವಸ್ತುಗಳನ್ನು ಪ್ರದರ್ಶಿದರೇ  ಉತ್ತಮವಾಗಿರುತ್ತದೆ ಎಂದು ಧಾರವಾಡದ ಕರ್ನಾಟಕ ವಿವಿ ಸಾಗರ ವಿಜ್ಞಾನ ವಿಭಾಗದ ಮುಖ್ಯಸ್ಥ ಜಗನ್ನಾಥ್ ರಾಥೋಡ್ ಹೇಳಿದ್ದಾರೆ. 

ಅದರಂತೆ ಅಪರೂಪದ ಆವಿಷ್ಕಾರಗಳು ಅಥವಾ ಮಾದರಿಗಳನ್ನು ಹೊಸದಾಗಿ ನಿರ್ಮಾಣವಾಗುತ್ತಿರುವ ಸಂಸತ್ ಭವನದಲ್ಲಿ ಪ್ರದರ್ಶಿಸಲಾಗುವುದು ಎಂದು ಎನ್‌ಐಒ ಅಧಿಕಾರಿಗಳು ಹೇಳಿದ್ದಾರೆ.

“ಬಲೀನ್ ತಿಮಿಂಗಿಲದ ಅಸ್ಥಿಪಂಜರವು ಅಪರೂಪವಾಗಿದ್ದು,  ಅದನ್ನು ಇಲ್ಲಿ ಹೇಗೆ ಜೋಡಿಸಲಾಗಿದೆ ಮತ್ತು ಪ್ರದರ್ಶಿಸಲಾಗಿದೆ  ಎಂಬ ಬಗ್ಗೆ ರಾಷ್ಟ್ರೀಯ ಸಾಗರ ವಿಜ್ಞಾನ ಅಧಿಕಾರಿಗಳು  ವಿಚಾರಿಸಿದ್ದಾರೆ ಎಂದು ಕೆಯುಡಿಯ ಸಾಗರ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಕುಮಾರ್ ಹರಗಿ ತಿಳಿಸಿದ್ದಾರೆ.

ಇಲಾಖೆಯಲ್ಲಿರುವ ಅಸ್ಥಿಪಂಜರವು ಕಳೆದ ಹಲವು ದಶಕಗಳಿಂದ ಸಮುದ್ರ ಜೀವಶಾಸ್ತ್ರದ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಪ್ರಮುಖ ಆಕರ್ಷಣೆಯಾಗಿದೆ. ಬಲೀನ್ ತಿಮಿಂಗಿಲಗಳು ಅಥವಾ ನೀಲಿ ತಿಮಿಂಗಿಲಗಳು 136 ಟನ್ ವರೆಗೆ ತೂಗುತ್ತವೆ. ಆದಾಗ್ಯೂ, ಅಸ್ಥಿಪಂಜರದ ಉದ್ದ 12 ಮೀಟರ್ ಮತ್ತು ಇದು ಮೂರು ಟನ್ ತೂಕವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT