ಬಿಸಿಲ ಝಳ, ಕೋವಿಡ್ ಹೆಚ್ಚಳ: ನಗರಕ್ಕೆ ನೀರು ಪೂರೈಕೆಯಲ್ಲಿ ತನ್ನ ದಾಖಲೆಯನ್ನೇ ಮುರಿದ ಬಿಡಬ್ಲ್ಯುಎಸ್ಎಸ್ ಬಿ! 
ರಾಜ್ಯ

ಬಿಸಿಲ ಝಳ, ಕೋವಿಡ್ ಹೆಚ್ಚಳ: ನಗರಕ್ಕೆ ನೀರು ಪೂರೈಕೆಯಲ್ಲಿ ತನ್ನ ದಾಖಲೆಯನ್ನೇ ಮುರಿದ ಜಲಮಂಡಳಿ!

ಬಿಸಿಲಿನ ಝಳ ಹೆಚ್ಚಳವಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕೋವಿಡ್-19 ಹೆಚ್ಚಳದ ಆತಂಕ ನೀರಿನ ಬೇಡಿಕೆಯನ್ನು ಹಿಂದೆಂದಿನ ಬೇಸಿಗೆಗಳಿಗಿಂತ ಹೆಚ್ಚು ಮಾಡಿದೆ.

ಬೆಂಗಳೂರು: ಬಿಸಿಲಿನ ಝಳ ಹೆಚ್ಚಳವಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕೋವಿಡ್-19 ಹೆಚ್ಚಳದ ಆತಂಕ ನೀರಿನ ಬೇಡಿಕೆಯನ್ನು ಹಿಂದೆಂದಿನ ಬೇಸಿಗೆಗಳಿಗಿಂತ ಹೆಚ್ಚು ಮಾಡಿದೆ.
 
ಕೋವಿಡ್-19 ಹೆಚ್ಚುತ್ತಿರುವುದರಿಂದ ಪದೇ ಪದೇ ಕೈ ತೊಳೆಯುವುದು, ಹಿಂದೆಂದಿಗಿಂತಲೂ ಹೆಚ್ಚು ಬಾರಿ ಸ್ನಾನ ಮಾಡುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಡಬ್ಲ್ಯುಎಸ್ಎಸ್ ಬಿ ಕಾವೇರಿ ನೀರನ್ನು ನಗರದ ಜನತೆಗೆ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ನೀರು ಪೂರೈಕೆ ಮಾಡಿದ್ದು, ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದಿದೆ. 

ಏ.6 ರಿಂದ ಆರಂಭಗೊಂಡು ಪ್ರತಿದಿನ 1,468 ರಿಂದ 1,475 ಮಿಲಿಯನ್ ಲೀಟರ್ ಗಳಷ್ಟು ನೀರನ್ನು ಬಿಡಬ್ಲ್ಯುಎಸ್ಎಸ್ ಬಿ ಪೂರೈಕೆ ಮಾಡಿದೆ. ಈ ಬಗ್ಗೆ ಜಲಮಂಡಳಿಯ ಮುಖ್ಯ ಇಂಜಿನಿಯರ್, ಕಾವೇರಿ, ಎಸ್ ಬಿ ರಮೇಶ್ ಮಾಹಿತಿ ನೀಡಿದ್ದು, "ಹಿಂದಿನ ವರ್ಷಗಳಿಗಿಂತ ಈ ವರ್ಷ ಬಿಸಿಲ ಝಳ ಹೆಚ್ಚಾಗಿದೆ. ಈ ನಡುವೆ ಕೋವಿಡ್-19 ಸೋಂಕು ಪ್ರಸರಣವೂ ಹೆಚ್ಚುತ್ತಿದ್ದು, ಸೋಂಕು ಬಾರದ ರೀತಿಯಲ್ಲಿ ಎಚ್ಚರ ವಹಿಸುವುದಕ್ಕಾಗಿ ಜನತೆ ಹೆಚ್ಚಿನ ನೀರನ್ನು ಬಳಕೆ ಮಾಡುತ್ತಿದ್ದಾರೆ. ಈ ಕಾರಣದಿಂದ ನೀರಿನ ಬೇಡಿಕೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದ್ದು, 6 ನೇ ಪಂಪ್ ನ್ನು ಕಾರ್ಯಾಚರಣೆಗೆ ಒಳಪಡಿಸಿದ್ದೇವೆ ಎಂದು ತಿಳಿಸಿದ್ದಾರೆ. 

ಕಳೆದ ವಾರದವರೆಗೂ ಬಿಡಬ್ಲ್ಯುಎಸ್ಎಸ್ ಬಿ ತೊರೆಕಾಡನಹಳ್ಳಿ ಜಲಾಶಯದಿಂದ 1,140 ರಿಂದ 1,142 ಎಂಎಲ್ ಡಿ ನೀರನ್ನು ಪೂರೈಕೆ ಮಾಡುತ್ತಿತ್ತು.  ಮೂರು ದಿನಗಳಿಂದ ನೀರು ಪೂರೈಕೆ ಪ್ರಮಾಣವನ್ನು 300 ಎಂಎಲ್ ಡಿ ಯಷ್ಟು ಹೆಚ್ಚಿಸಲಾಗಿದೆ. ಈ ವರೆಗೂ ಪೂರೈಕೆಯಾಗಿರುವ ನೀರಿನ ಗರಿಷ್ಠ ಪ್ರಮಾಣ 1,452 ಎಂಎಲ್ ಡಿ ಆಗಿದೆ ಎಂದು ಎಸ್ ಬಿ ರಮೇಶ್ ಮಾಹಿತಿ ನೀಡಿದ್ದಾರೆ. 

ನೀರಿನ ಪೂರೈಕೆ ಪ್ರಮಾಣವನ್ನು ಹೆಚ್ಚಿಸಿ ನಾವು ದೊಡ್ದ ಸವಾಲು ಹಾಗೂ ಅಪಾಯವನ್ನು ತೆಗೆದುಕೊಂಡಿದ್ದೇವೆ. ಈ ವರೆಗೂ ಕೇವಲ 5 ಪಂಪ್ ಗಳನ್ನು ಮಾತ್ರವೇ ಬಳಕೆ ಮಾಡಲಾಗುತ್ತಿತ್ತು. ಪ್ರಾಯೋಗಿಕವಾಗಿ ಈಗ 16-18 ಗಂಟೆಗಳು ಮಾತ್ರವೇ ಪಂಪ್ ಮಾಡುತ್ತಿದ್ದೇವೆ. ಕೆಲವು ದಿನಗಳ ಬಳಿಕ ದಿನಪೂರ್ತಿ ಪಂಪ್ ಗಳು ಕಾರ್ಯಾಚರಣೆ ಮಾಡಲಿದ್ದು 10-15 ಎಂಎಲ್ ಡಿ ನೀರು ಹೆಚ್ಚು ಸಿಗಲಿದೆ, ಏಪ್ರಿಲ್-ಮೇ ತಿಂಗಳಲ್ಲಿ ನೀರಿನ ಪೂರೈಕೆ ಬೇಡಿಕೆಯನ್ನು ತಲುಪಲಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT