ರಾಜ್ಯ

ಮಸ್ಕಿ ಉಪಚುನಾವಣೆ: ಹಣ ವಿತರಿಸುತ್ತಿದ್ದ ಇಬ್ಬರು, ಹಣ ಸ್ವೀಕರಿಸಿದ ಓರ್ವ ಮಹಿಳೆ ಸೆರೆ

Raghavendra Adiga

ರಾಯಚೂರು: ಚುನಾವಣೆ ಸಂಬಂಧ ಹಣ ಹಂಚಿಕೆ ಆರೋಪದಡಿ ಇಬ್ಬರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಮೂವರು ಹಾಗೂ ನಗದು ಸ್ವೀಕರಿಸಿದ್ದಕ್ಕಾಗಿ ಮಹಿಳೆಯೊಬ್ಬರನ್ನು ಜಿಲ್ಲಾ ಪೊಲೀಸರು ಬಂಧಿಸಿದ ಘಟನೆ ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ನಡೆದಿದೆ. ಮಹಿಳೆಗೆ ಹಣವನ್ನು ವಿತರಿಸಿದ ವ್ಯಕ್ತಿ ಪರಾರಿಯಾಗಿದ್ದಾನೆ.

ಹರ್ವಾಪುರದಲ್ಲಿ ಹಣ ವಿತರಿಸುವ ವಿಡಿಯೋ ತುಣುಕು ವೈರಲ್ ಆದ ನಂತರ ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಲಾಗಿದೆ.

ಚುನಾವಣಾ ಅಧಿಕಾರಿಗಳ ದೂರಿನ ನಂತರ ಪೊಲೀಸರು ಹಾಸನದ ಹೊಳೆನರಸೀಪುರ ಪಟ್ಟಣದ ಅಮಿತ್ ನನ್ನು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ದುರ್ಗಾ ಕ್ಯಾಂಪ್‌ನಲ್ಲಿ ಮತದಾರರಿಗೆ ಹಣ ವಿತರಿಸಿದ್ದಕ್ಕಾಗಿ ಬಿಜೆಪಿ ಕಾರ್ಯಕರ್ತ ಚಿಟ್ಟಿಬಾಬು ಅವರನ್ನು ಬಂಧಿಸಲಾಯಿತು.

ಹಣ ಹಂಚಿಕೆ ಮಾಡಿದ್ದಕ್ಕಾಗಿ ಹಾಸನದ ಮೂಲದ ಹೇಮಂತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಹಣವನ್ನು ಸ್ವೀಕರಿಸಿದ್ದಕ್ಕಾಗಿ ತಾಯಮ್ಮನನ್ನು ಬಂಧಿಸಿದ್ದಾರೆ,

SCROLL FOR NEXT